ಬಳ್ಳಾರಿ / ಕಂಪ್ಲಿ : ನವರಾತ್ರಿ ಎಂದಾಕ್ಷಣ ಮೊದಲು ನೆನೆಪಿಗೆ ಬರೋದು ದುರ್ಗಾ ದೇವಿ ಮತ್ತು 9 ದಿನಗಳ ಪೂಜೆ. ನವರಾತ್ರಿ ಹಬ್ಬದಲ್ಲಿ ಅನೇಕರು ತಮ್ಮ ಸಮಸ್ಯೆಗಳನ್ನು ಕಳೆದುಕೊಳ್ಳಲು ಹಬ್ಬವನ್ನು ಆಚರಿಸುತ್ತಾರೆ, ಆದರೆ ಪ್ರತಿ ವರ್ಷ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನವೂ ವಿವಿಧ ಧಾರ್ಮಿಕ ಕ್ಷೇತ್ರಗಳ ಮೂರ್ತಿ ( ಗೊಂಬೆ ) ಗಳನ್ನು ಮಾಡಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಎನ್ನುವ ತಾಲೂಕು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದೇ ಇಲ್ಲಿನ ವಿನಾಯಕ ದೇವಾಲಯ. ಈ ವಿನಾಯಕ ದೇವಾಲಯವು ಇಡಗುಂಜಿಯ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಪ್ರತಿ ವರ್ಷ ಏನಿಲ್ಲವಾದರೂ 1 ಮಿಲಿಯನ್ಗೂ ಅಧಿಕ ಭಕ್ತಾಧಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಈ ದೇವಾಲಯವು ದೇಶ – ವಿದೇಶಗಳಲ್ಲೂ ತನ್ನದೇ ಆದ ಖ್ಯಾತಿಯನ್ನು ಒಳಗೊಂಡಿದೆ.
ಇಂತಹ ಪ್ರಸಿದ್ಧ ದೇವಾಲಯದ ಇಡಗುಂಜಿಯ ಗಣೇಶನ ಮೂರ್ತಿಯನ್ನು ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿದಿನ ಅಲಂಕಾರಗೊಳ್ಳುವ ಮೂರ್ತಿ ( ಗೊಂಬೆ ) ಗಳ ಸೋಮವಾರ ರಾತ್ರಿಯ ದಿನದ ಇಡಗುಂಜಿ ಶ್ರೀ ಗಣೇಶ ಎಲ್ಲಾ ಭಕ್ತರ ಆಕರ್ಷಣ ಕೇಂದ್ರವಾಗಿ ಮನಸೂರೆಗೊಂಡಿತ್ತು.
ವರದಿ : ಜಿಲಾನಸಾಬ್ ಬಡಿಗೇರ್



















