ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಹಕಾರ ಸಂಘಕ್ಕೆ ಸುಮಾರು 9.43 ಲಕ್ಷ ನಿವ್ವಳ ಲಾಭ : ಜಿ.ಸಂಜೀವರೆಡ್ಡಿ

ಬಳ್ಳಾರಿ / ಕಂಪ್ಲಿ : ಸಮೀಪದ ದಮ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸುಮಾರು 9.43 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಜಿ. ಸಂಜೀವರೆಡ್ಡಿ ಹೇಳಿದರು.
ಇಲ್ಲಿನ ಕಛೇರಿ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡುವ ಜತೆಗೆ ಸಂಘದಲ್ಲಿ ವ್ಯಾಪಾರ, ವ್ಯವಹಾರ ಮಾಡಬೇಕು ಎಂದರು. ಮುಖ್ಯಕಾರ್ಯನಿರ್ವಾಹಕ ಎಸ್.ಎಂ.ರೇವಣಸಿದ್ದಯ್ಯ ಅವರು ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 2440 ಸದಸ್ಯರಿದ್ದು, ಒಟ್ಟು ಷೇರು ಬಂಡವಾಳ 214.94 ಲಕ್ಷಗಳಿರುತ್ತದೆ. ರೂ.342.72 ಲಕ್ಷ ಠೇವಣಿ ಹೊಂದಿರುತ್ತದೆ. ಸಂಘವು 884 ಜನ ಸದಸ್ಯರಿಗೆ ರೂ.1859.67 ಲಕ್ಷ ಬೆಳೆಸಾಲ ವಿತರಿಸಿದೆ. ರೂ.249.87 ಲಕ್ಷದ ರಾನಾಯನಿಕ ಗೊಬ್ಬರ, ಪಡಿತರ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸಿ, ಇದರಿಂದ ರೂ.9.64 ಲಕ್ಷ ವ್ಯಾಪಾರಿ ಲಾಭವಾಗಿಗಳಿಸಿರುತ್ತದೆ. ಸಂಘವು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದು, ಇನ್ನೂ ಹೆಚ್ಚಿನ ಮಟ್ಟದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ವೇಳೆ ಉಪಾಧ್ಯಕ್ಷ ಡಿ.ಅಂಜೀನಪ್ಪ, ನಿರ್ದೇಶಕರಾದ ಪಿ.ಶಂಕರಗೌಡ, ಸಿ.ಗೋಪಾಲ, ಎಂ.ದೇವರೆಡ್ಡಿ, ಕೆ.ಮಲ್ಲಿಕಾರ್ಜುನ, ಎ.ಸರ್ವೋತ್ತಮಗೌಡ, ಪೂಜಾರಿ ಬಸವರಾಜ, ಕಾಳಿ ಮಂಜುನಾಥ, ಜೆ.ಪುಷ್ಪ, ಜಿ.ಮಂಗಮ್ಮ, ಚಲುವಾದಿ ಹಂಪಮ್ಮ, ಕೆ.ಪಂಪಾಪತಿ, ಸಿ.ಮಾಣಿಕ್ಯರೆಡ್ಡಿ, ಬಿ.ವಿ.ಕುಮಾರ ಶರ್ಮ, ಪಿ.ಶಿವಪ್ಪ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!