ಬಳ್ಳಾರಿ / ಕಂಪ್ಲಿ : ಸಹಕಾರ ಸಂಘವು ಸುಮಾರು 4.61 ಲಕ್ಷ ನಿವ್ವಳ ಲಾಭಗಳಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ರಮಣರೆಡ್ಡಿ ಹೇಳಿದರು.
ಇಲ್ಲಿನ ಕೊರ್ಲಗುಂದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಆವರಣದಲ್ಲಿ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸಹಕಾರ ಸಂಘದಲ್ಲಿರುವ ಸಾಲ ಸೌಲಭ್ಯದೊಂದಿಗೆ ಇನ್ನಿತರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಮುಖ್ಯ ಭಾಷೆಕಾರ್ಯನಿರ್ವಾಹಕ ಜಿ.ಆರ್.ಅರುಣಕುಮಾರ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ 1536 ಜನ ಸದಸ್ಯರನ್ನು ಹೊಂದಿದೆ. ಕೆಸಿಸಿ, ಪಂಪ್ ಸೆಟ್ ಸಾಲ ಸೇರಿದಂತೆ ಸುಮಾರು 8.34 ಕೋಟಿ ಸಾಲ ವಿತರಿಸಿದ್ದು, ಶೇ.99% ವಸೂಲಾತಿ ಸಾಧನೆ ಮಾಡಿದೆ. 900 ಜನರಿಗೆ ಯಶಸ್ವಿನಿ ಯೋಜನೆ ಅಳವಡಿಸಲಾಗಿದೆ ಎಂದರು.
ತದ ನಂತರ ಇನ್ನಿತರ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ವಿ.ದೊಡ್ಡಕೇಶವರೆಡ್ಡಿ, ಸಹಕಾರ ಸಂಘದ ಉಪಾಧ್ಯಕ್ಷ ಬಿ.ದೊಡ್ಡ ಗಾದಿಲಿಂಗಪ್ಪ, ನಿರ್ದೇಶಕರಾದ ವಿ.ಪ್ರದೀಪರೆಡ್ಡಿ, ಕೆ.ತಿಮ್ಮಪ್ಪ, ಬಿ.ಅಡಿವೆಪ್ಪ, ವೈ.ದೇವರೆಡ್ಡಿ, ನಾಗನಗೌಡ, ವೈ.ಯೋಗಪ್ಪ, ಯಂಕಮ್ಮ, ನಾಗೇಶ್ವರಮ್ಮ, ಕೆ.ಲಕ್ಷ್ಮ್ಯೆ, ವಿ.ಶಾಂತಕುಮಾರ, ಬಿ.ಎಸ್.ನಾಗಭೂಷಣ ಸೇರಿದಂತೆ ರೈತ ಮುಖಂಡರು ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















