
ಬೆಳಗಾವಿ/ಅಥಣಿ: ಭಾರತದ ಜನಪ್ರಿಯ ನಾಯಕ, ದೇಶವನ್ನು ವಿಶ್ವಮಟ್ಟದಲ್ಲಿ ಹೆಮ್ಮೆಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ, ಅಥಣಿ ಪಟ್ಟಣದ ಶ್ರೀ ಸಿದ್ಧೇಶ್ವರ ಮೋಫತ್ ವಾಚನಾಲಯದಲ್ಲಿ ಸೇವಾ ಪಾಕ್ಷಿಕ – 2025 ಅಭಿಯಾನದ ಅಂಗವಾಗಿ ಭವ್ಯ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಅಪಾರ ಉತ್ಸಾಹದಿಂದ ರಕ್ತದಾನ ಮಾಡಿದ್ದು, ಪ್ರಧಾನಿಯವರ ಸೇವಾ ತತ್ವ, ಜನಸೇವೆ ಮತ್ತು ತ್ಯಾಗದ ಮನೋಭಾವವನ್ನು ಸ್ಮರಿಸಿದರು. ಕಾರ್ಯಕ್ರಮದ ಮೂಲಕ ಬಿಜೆಪಿ ಕಾರ್ಯಕರ್ತರು ಸಮಾಜ ಸೇವೆಯತ್ತ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು:
ಅಥಣಿ ಮತಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಮಹೇಶ ಕುಮಟಳ್ಳಿ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮೇಶ ಬಂಟೂಟ್ಕರ್, ಓಬಿಸಿ ಮೋರ್ಚಾ ಅಥಣಿ ಮಂಡಲ ಅಧ್ಯಕ್ಷ ಗಿರೀಶ್ ಬುಟ್ಟಾಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಪ್ಪಣ್ಣ ಮುದುಕನ್ನವರ್, ಅಥಣಿ ಮಂಡಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಟ್ಟು ಹಿರೇಮಠ್ ಸೇರಿದಂತೆ ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ವಿಶೇಷತೆ:
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಟ್ಟ ಈ ಕಾರ್ಯಕ್ರಮವು ಜನಸೇವೆಯ ಹಬ್ಬದಂತೆ ನಡೆದಿದ್ದು, “ಸೇವೆನೇ ಸಮ್ಮಾನ” ಎಂಬ ತತ್ವದ ಪ್ರೇರಣೆಯೊಂದಿಗೆ ಬಿಜೆಪಿ ಕಾರ್ಯಕರ್ತರು ಸಮಾಜದ ಹಿತಕ್ಕಾಗಿ ಯಾವಾಗಲೂ ಸಜ್ಜಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ವರದಿ. ವಿಠ್ಠಲ ಖೋಕಾಟೆ



















