ಸತ್ಯ ಶಾಂತಿ ಅಹಿಂಸೆಗಳೆಂಬ
ಅಸ್ತ್ರಗಳನ್ನು ಬೋಧಿಸಿ ಪಾಲಿಸಿದ ಗಾಂಧೀ,
ನ್ಯಾಯ ನೀತಿ ಸಮಾನತೆಗಾಗಿ
ಅಹೋರಾತ್ರಿ ದುಡಿದ ಗಾಂಧೀ
ಗುಲಾಮಗಿರಿಯ ದಾಸ್ಯದಿಂದ
ನಮ್ಮನೆಲ್ಲ ಪಾರು ಮಾಡಲು
ಪ್ರಾಣವನ್ನೇ ತ್ಯಾಗ ಮಾಡಿದ ಗಾಂಧೀ,
ಮತ್ತೆ ಬಂದಿದೆ ನಿನ್ನ ಜಯಂತಿ, ಪ್ರತಿ ವರ್ಷವೂ ಬರುವಂತೆ?!.
ಗಾಂಧಿ ನಮಗೆ ನೀ ಮಾತ್ರ
ಬೇಕು! ನಿನ್ನ ತತ್ವ ಸಿದ್ಧಾಂತ,
ಆದರ್ಶ ಗಳಲ್ಲ,
ಅಕ್ಟೋಬರ್ ಬಂತೆಂದರೆ ಸಾಕು,ಹರಿದಾಡುತ್ತವೆ ನಮ್ಮವರ ಬಾಯಲ್ಲಿ,
ನಿನ್ನ ತತ್ವ ಆದರ್ಶಗಳು,! ನಿನ್ನ
ಹೆಸರಿನ ಸಮೇತ, ಯಾಕೆಂದರೆ
ನೀನಲ್ಲವೇ ಮಹಾತ್ಮ?!,
ನಿನ್ನ ಆಹಾರ ಉಡುಗೆ, ತೊಡುಗೆ ಬಗ್ಗೆ ಏನೇನೋ
ಕುಹಕ ಮಾತುಗಳು!
ನಿನ್ನ ಸರಳ ಜೀವನ ಕಂಡು
ಕರಬುವವರೇ ಅಧಿಕ!
ಅಂದಹಾಗೆ ನೀ ಕಂಡ
ರಾಮರಾಜ್ಯದ ಕನಸು,
ಇನ್ನೂ ಕನಸಾಗೇ ಉಳಿದಿದೆ,
ನನಸಾಗುವ ದಿನಗಳು ದೂರ ಹೋದಂತಿವೆ,ಇಂಥ ವೇಳೆಯಲ್ಲಿ, ಮತ್ತೇ ಬಂದಿದೆ ನಿನ್ನ ಜಯಂತಿ !, ನಿನ್ನ ಹೆಸರ ಹೇಳಿ ನಾವೂ ಆಚರಿಸುತ್ತಲೇ
ಇದ್ದೇವೆ,
ಆಚರಿಸುತ್ತಲೇ ಇದ್ದೇವೆ…
- ಶಿವಪ್ರಸಾದ್ ಹಾದಿಮನಿ.
ಕೊಪ್ಪಳ.
ಸ. ಪ್ರ. ದ.ಮಹಿಳಾ ಕಾಲೇಜು.
ಕನ್ನಡ ಉಪನ್ಯಾಸಕರು.




















