ಗುರುಮಠಕಲ್: ಪುರಸಭೆ ಕಾರ್ಯಾಲಯದಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆಯನ್ನು ಮುಖ್ಯಾಧಿಕಾರಿ ಹಾಗೂ ಸದಸ್ಯರು ಸದಸ್ಯರು ಮತ್ತು ಸಿಬ್ಬಂದಿಗಳು ಸಲ್ಲಿಸಿದರು.
ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೊತಿ ಮಾತನಾಡಿ ಈ ನೆಲದ ಶ್ರೇಷ್ಠತೆಯ ಉತ್ಥಾನದ ಮತ್ತು ಉದ್ಧಾರದ ಕಾರ್ಯಕ್ಕೆ ಆಶೀರ್ವಾದ ರೂಪದ ಶಕ್ತಿಯಾಗಿ ನಮಗೆ ನೆರವಾಗುವ ದಿವ್ಯಗ್ರಂಥವನ್ನು ಕಾವ್ಯಮಯ ರೂಪದಲ್ಲಿ ರಚಿಸಿದ ದಾರ್ಶನಿಕ ಆದಿಕವಿ, ಋಷಿಕವಿ ಶ್ರೀ ವಾಲ್ಮೀಕಿಯವರು ಸಾಮಾನ್ಯನೂ ಮಹರ್ಷಿಯಂತಹ ಮಹೊನ್ನತಿಗೆ ಏರಬಹುದು ಎಂಬುವುದನ್ನ ಅವರ ಜೀವನಕಥೆಯ ಮೂಲಕ ತಿಳಿದು ನಮ್ಮ ಬಾಳ್ವೆ ಪುರಾಷಾರ್ಥ ಸಿದ್ಧಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಯಂತಿಯಲ್ಲಿ ಪುರಸಭೆ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















