
ಬಳ್ಳಾರಿ / ಕಂಪ್ಲಿ : ಪಟ್ಟಣದ ಬೈಪಾಸ್ ರಸ್ತೆಯ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಎಮ್ಮಿಗನೂರು ಕನಕಪ್ಪ ಸುಣಗಾರ ಅವರ ಜನ್ಮದಿನದ ಅಂಗವಾಗಿ ಶಾಸಕ ಜೆ. ಎನ್. ಗಣೇಶ ಅವರ ಸಮ್ಮುಖದಲ್ಲಿ ಮಂಗಳಮುಖಿಯರಿಗೆ ಉಚಿತವಾಗಿ ವಸ್ತ್ರ (ಸೀರೆ) ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿಕೊಂಡರು.
ನಂತರ ಶಾಸಕ ಗಣೇಶ ಅವರು ಕನಕಪ್ಪ ಇವರಿಗೆ ಆಶೀರ್ವದಿಸಿ ಮಾತನಾಡಿ, ಆಡಂಬರದ ಆಚರಣೆ ಬಿಟ್ಟು, ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡಿದ್ದು, ರಾಜಕೀಯ, ಆರ್ಥಿಕವಾಗಿ ಬೆಳೆಯುವ ಜೊತೆಗೆ ಇನ್ನಷ್ಟು ಸೇವೆ ಮಾಡಲು ದೇವರು ಶಕ್ತಿ ನೀಡಲಿ. ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮುಂದಿನ ದಿನದಲ್ಲಿ ರಾಜಕೀಯವಾಗಿ ಸೇವೆ ಮಾಡಲು ಅವಕಾಶ ದೊರಕಲಿ ಎಂದರು.
ತದ ನಂತರ ಶಾಸಕರ ಮತ್ತು ಮಂಗಳಮುಖಿಯರ ಆಶೀರ್ವಾದ ಪಡೆದ ನಂತರ ಯುವ ಮುಖಂಡ ಕನಕಪ್ಪ ಸುಣಗಾರ ಮಾತನಾಡಿ, ಜನ ಮೆಚ್ಚಿದ ನಾಯಕ ಶಾಸಕ ಗಣೇಶ ಅವರ ಮಾರ್ಗದರ್ಶನದಂತೆ ಸಣ್ಣಪುಟ್ಟ ಸಮಾಜ ಸೇವೆಗಳನ್ನು ಮಾಡುತ್ತಿದ್ದು, ಇನ್ನಷ್ಟು ಸೇವೆ ಮಾಡಲು, ಪ್ರತಿಯೊಂದು ಹಂತದಲ್ಲಿ ಶಾಸಕರ ಆಶೀರ್ವಾದ ಅಗತ್ಯವಾಗಿದೆ. ಮಂಗಳಮುಖಿಯರಿಗೆ ವಸ್ತ್ರದಾನ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಇಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿದ ನಂತರ 25ಕ್ಕೂ ಹೆಚ್ಚು ಮಂಗಳಮುಖಿಯರಿಗೆ ವಸ್ತ್ರದಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ವಿರೂಪಾಕ್ಷಿ, ಮಾಧ್ಯಮ ಸಲಹೆಗಾರ ಯೋಹಾನ, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಮುಖಂಡರಾದ ಕೆ.ಷಣ್ಮುಕಪ್ಪ, ಮೆಟ್ರಿ ಗಿರೀಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















