
ಕಂಪ್ಲಿ : ಪಟ್ಟಣದ ಕಾಳಿಕಾ ಕಮಠೇಶ್ವರ
ದೇವಸ್ಥಾನದಲ್ಲಿ ನಡೆದ ಕಂಪ್ಲಿ ವಿಶ್ವಕರ್ಮ ಸಮುದಾಯದ ಮಹಿಳಾ ಮುಖಂಡರ ಸಭೆಯಲ್ಲಿ ವಿಶ್ವಕರ್ಮ ಮಹಿಳಾ ಮಂಡಳಿಯ ರಚನೆ ಬಗ್ಗೆ ಚರ್ಚಿಸಿ ನೂತನ ವಿಶ್ವಕರ್ಮ ಮಹಿಳಾ ಮಂಡಳಿಯನ್ನು ರಚನೆಯ ಜೊತೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ವಿಶ್ವಕರ್ಮ ಮಹಿಳಾ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಡಿ.ವೀಣಾಮೌನೇಶ್, ಉಪಾಧ್ಯಕ್ಷೆಯಾಗಿ ಎ.ಜಯಲಕ್ಷ್ಮೀ, ಡಿ.ಸುಜಾತಾ, ಕಾರ್ಯದರ್ಶಿಯಾಗಿ ಎ.ಶಶೀಕಲಾ, ಸಹಕಾರ್ಯದರ್ಶಿಯಾಗಿ ಭಾರತಿ, ಖಜಾಂಚಿಯಾಗಿ ಪಿ.ಭಾರತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ವಿಜಯಲಕ್ಷ್ಮೀ, ಲಾವಣ್ಯ, ಪದ್ಮಾವತಿ, ಎ.ಭಾರತಿ, ನಾಗರತ್ನ, ಎ.ವಸಂತ, ಕೆ.ಶಾರದಾ, ಎ.ಕಲಾವತಿ, ಪೂಜಾ ಭರತ್ ಸೇರಿದಂತೆ ಇತರರನ್ನು ಆಯ್ಕೆ ಮಾಡಿದರು. ನೂತನ ವಿಶ್ವಕರ್ಮ ಮಹಿಳಾ ಮಂಡಳಿಯ ಪದಾಧಿಕಾರಿಗಳಿಗೆ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಆಯ್ಕೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹರಿಸಿದರು. ನಂತರ ಮಾತನಾಡಿದ ಅವರು ಮಹಿಳಾ ಸಂಘಗಳಿಗೆ ಸರ್ಕಾರದ ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಅರಿತಕೊಂಡು ಸದುಪಯೋಗ ಪಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಡಿ.ರುದ್ರಪ್ಪಾಚಾರ್, ಮುಖಂಡರಾದ ಡಿ.ಮೌನೇಶ್, ಎ.ಚಂದ್ರಶೇಖರ್, ಕಾಳಾಚಾರಿ, ಗುರುಮೂರ್ತಿ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















