
ಗುರುಮಠಕಲ್/ಬೋಡಬಂಡಾ: ನ. 05 ತಾಲೂಕಿನ ಬೋಡಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಸಂಪನ್ನಗೊಂಡಿತು.
ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಹೋಮ, ಅಭ್ಯಂಗ ಸ್ನಾನ, ಕಲ್ಯಾಣೋತ್ಸವ ಹಾಗೂ ರಥೋತ್ಸವ, ಉಂಜಲ ಸೇವೆ ಸಾಂಪ್ರದಾಯಿಕವಾಗಿ ಮಧ್ಯಾಹ್ನದವರೆಗೆ ಜರುಗಿದವು.
ಸಾಯಂಕಾಲದ ಕೈ ಕುಸ್ತಿ ಪಂದ್ಯಗಳು ಜರುಗಿದವು, ಕೈ ಕುಸ್ತಿ ಪಂದ್ಯದಲ್ಲಿ ನೆರೆಯ ತೆಲಂಗಾಣ ರಾಜ್ಯ ಸೇರಿದಂತೆ ಸುತ್ತಮುತ್ತಲಿನ ಪಟುಗಳು ಪಾಲ್ಗೊಂಡರು, ಅಸಂಖ್ಯಾತ ಭಕ್ತರನ್ನು ಹೊಂದಿರುವ ಬೋಡಬಂಡಾ ಸುಕ್ಷೇತ್ರಕ್ಕೆ ಬೆಳಿಗ್ಗೆಯಿಂದ ನೂರಾರು ಭಕ್ತರು ಕಾರ್ಯಕ್ರಮಗಳ ದರ್ಶನ ಪಡೆದು ಪುನೀತರಾದರು. ಕೈ ಕುಸ್ತಿ ಪಂದ್ಯಗಳ ಮುಕ್ತಾಯದೊಂದಿಗೆ 16ನೇಯ ಜಾತ್ರಾ ಮಹೋತ್ಸವ ಸಂಪನ್ನ ಗೊಂಡಿತು.
ಕಾರ್ಯಕ್ರಮದಲ್ಲಿ ಖಾಸಾಮಠದ ಶ್ರೀಗಳು ಸೇರಿದಂತೆ ವಿವಿಧ ಮಠದ ಶ್ರೀಗಳು ಭಾಗವಹಿಸಿದರು, ದೇವಸ್ಥಾನ ಜೀರ್ಣೋದ್ಧಾರ ಸಮೀತಿಯ ಮಣಿಕಂಠ ರಾಥೋಡ್, ಅಯ್ಯಪ್ಪ ರಾಥೋಡ್ ಹಾಗೂ ರಾಜು ರಾಥೋಡ್ ದೇವಸ್ಥಾನದ ಸದ್ಭಕ್ತರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ.



















