
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ಸಂಘಟನೆಯ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಭಾರತೀಯ ಬೌದ್ಧ ಮಹಾಸಭಾ ಅಥಣಿ ತಾಲೂಕು ಅಧ್ಯಕ್ಷರಾಗಿ ವಕೀಲರಾದ ಮಿತಿಷ ಪಟ್ಟಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸದಸ್ಯರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಿತಿಷ ಪಟ್ಟಣ ಅವರು ಬೌದ್ಧ ಧರ್ಮದ ತತ್ವಗಳನ್ನು ಜನರಲ್ಲಿ ಹರಡಲು ಮತ್ತು ಸಮಾಜ ಸೇವೆಗೆ ಪ್ರಾಮುಖ್ಯತೆ ನೀಡುವುದಾಗಿ ಹೇಳಿದರು.
ಅದರಂತೆ ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಕಾಂಬಳೆ ಹಾಗೂ ಖಜಾಂಚಿಯಾಗಿ ದಿಲೀಪ್ ಕಾಂಬಳೆ, ಹಾಗೂ ಇವರೊಂದಿಗೆ ಒಟ್ಟು 21 ಪದಾಧಿಕಾರಿಗಳ ಸಮಿತಿಯನ್ನು ರಚಿಸಿ ನೇಮಕ ಮಾಡಲಾಯಿತು.
ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ರಾಜೇಂದ್ರ ಕಾಂಬಳೆ,ವಿರುಪಾಕ್ಷಿ ಮೇತ್ರಿ, ರಮೇಶ್ ಶಿರೋಟ್ಟಿ, ಸತೀಶ್ ಕಲ್ಲನ್ನವರ, ಮುರುಗೇಶ್ ಗಸ್ತಿ, ಮತ್ತು ಶಶಿಕಾಂತ್ ಪುಂಡಿಪಲ್ಲೆ, ವಿಠ್ಠಲ್ ಕೊಕಾಟೆ, ಗೋಪಿ ಗಾಡಿವಡ್ಡರ್, ಪ್ರಶಾಂತ್ ಬೆಳ್ಳಂಕಿ, ಸ್ವಾತಿ ಭಜಂತ್ರಿ, ಶಶಿಕಲಾ ಹಿರೇಮನಿ, ಶಿವು ಭಜಂತ್ರಿ, ರಾಹುಲ್ ಬಜಂತ್ರಿ, ಸುಂದರ್ ನಂದಿವಾಲೆ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಸಂಘದ ಸದಸ್ಯರು, ಮುಂದಿನ ದಿನಗಳಲ್ಲಿ ಬೌದ್ಧ ಮಹಾಸಭೆಯ ಚಟುವಟಿಕೆಗಳು ಇನ್ನಷ್ಟು ಬಲ ಪಡೆದುಕೊಳ್ಳಲಿವೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ವರದಿ. ವಿಠ್ಠಲ ಖೋಕಾಟೆ



















