
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಸೀಸನ್ 2 ವಿಭಾಗ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆ ಯೋಜನೆ ಮಾಡಲಾಯಿತು.
ಎಇಇ ಆದ ರಂಗಸ್ವಾಮಿಯವರು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು
ಕ್ರೀಡೆಗಳು ನಮಗೆ ಸಂಯುಕ್ತತೆ, ಸ್ಪರ್ಧಾತ್ಮಕತೆ ಮತ್ತು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಬೆಳಸುವ ಅವಕಾಶ ನೀಡುತ್ತವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಶ್ರಮ ಮತ್ತು ಯಶಸ್ಸುಗಳಿಗಾಗಿ ಶುಭವಾಗಲಿ ಎಂದು ಹಾರೈಸುತ್ತೇನೆ. ನಾವು ಈ ಕ್ರಿಕೆಟ್ ಪಂದ್ಯಾವಳಿಯ ಯಶಸ್ಸಿಗಾಗಿ KEB ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ಆಟವು ಸಾರ್ಥಕವಾಗಲಿ ಮತ್ತು ಪ್ರೇಕ್ಷಕರಿಗೂ ಸ್ಫೂರ್ತಿದಾಯಕವಾಗಲಿ ಎಂಬುದು ನಮ್ಮ ಆಶಯ.
ಈ ಮೂಲಕ ನಾನು ಈ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ಘೋಷಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಇಇ ರಂಗಸ್ವಾಮಿ ಹಾಗೂ ಹನೂರು ತಾಲೂಕಿನ ಕೆಇಬಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಉಸ್ಮಾನ್ ಖಾನ್



















