ಬಳ್ಳಾರಿ / ಕಂಪ್ಲಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞ ವೈದ್ಯರನ್ನು ಖಾಯಂಗೊಳಿಸಿ ಮತ್ತು ಅಗತ್ಯ ಸಲಕರಣೆಗಳನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬೆಂಬಲಿತ ಸಂಘಟನೆಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ನೋಡಲ್ ಅಧಿಕಾರಿ ಡಾ.ಪೂರ್ಣಿಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಕೆ.ಎಂ.ಆರ್ ವಿ.ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ ಅನುಭವಿ ತಜ್ಞ ವೈದ್ಯರನ್ನು ಖಾಯಂ ನಿಯೋಜಿಸಿ ಮತ್ತು ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸಿ ಗರ್ಭಿಣಿಯರು ಹೆರಿಗೆಗೆ ಬಂದಾಗ ಸಮರ್ಪಕ ಚಿಕಿತ್ಸೆ ನೀಡಿ ಸಿಸೇರಿಯನ್ ಹೆರಿಗೆಯನ್ನು ಚಿಕಿತ್ಸೆ ನಿರ್ವಹಿಸಿ ಹೆಚ್ಚಿನ ಚಿಕ್ಕಿತ್ಸೆಗಾಗಿ 108 ವಾಹನದಲ್ಲಿ ಬೇರೆ ಆಸ್ಪತ್ರೆಗೆ ಕಳುಹಿಸಿ ಅಸ್ಫತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಹಾಳಾಗಿದೆ ಅದನ್ನು ಅನುಸ್ಥಾಪಿಸಿ ನುರಿತ ತಂತ್ರಜ್ಞರನ್ನು ನೇಮಿಸಿ ಸಾರ್ವಜನಿಕರು ಆಸ್ಪತ್ರೆಗೆ ಚಿಕ್ಕಿತ್ಸೆಗೆ ಬಂದಾಗ ಔಷಧಗಳನ್ನು ಖಾಸಗಿ ಅಂಗಡಿಗಳಿಗೆ ಬರೆಯಬಾರದು ಆಸ್ಪತ್ರೆಯಲ್ಲಿರುವ ಔಷಧಗಳನ್ನು ನೀಡಿ ಸ್ವಚ್ಚತೆಗೆ ಆಧ್ಯತೆ ನೀಡಿ ತಾಲೂಕು ಅಸ್ಫತ್ರೆಯನ್ನು ಸಾರ್ವಜನಿಕರ ಸೇವೆಗೆ ಸಜ್ಜುಗೊಳಿಸಬೇಕು ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಬೇಕೆಂದು ಘೋಷಣೆ ಕೂಗುತ್ತ ಧರಣಿ ಸತ್ಯಾಗ್ರಹದೊಂದಿಗೆ ನಡೆಸಿದರು.
ಈ ಸಂದರ್ಭದಲ್ಲಿ ಬೆಂಬಲಿತ ಸಂಘಟನೆಗಳಾದ ಟಿ.ಯು.ಸಿ.ಸಿ.ಮುಖಂಡ ಲಕ್ಷ್ಮಣ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಂಸತರಾಜ ಕಹಳೆ, ಬೆಂಬಲಿತ ಸಂಘಟಿತರಾದ ಎಂ.ರವಿ ಕೆ.ದುರುಗೇಶ, ಮಂಗಳಮುಖಿ ರಾಜಮ್ಮ, ಸಣಾಪುರ ಮರಿಸ್ವಾಮಿ, ಸಿ.ಬಸವರಾಜ, ಪೆಂಟರ್ ನೀಲಪ್ಪ, ಬಿ. ಸಣ್ಣೆಪ್ಪ, ಹೆಚ್. ಬಸಪ್ಪ, ಪುರಷೋತ್ತಮ, ಸಿ.ಹುಸೇನಪ್ಪ, ಎನ್. ರಾಜಾಭಕ್ಷಿ ಸೇರಿ ಅನೇಕ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















