ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರಕಾರಿ ಪ್ರೌಢ ಶಾಲೆ ಗೌರ ಗ್ರಾಮದ ಶಿಕ್ಷಕಿ ಸೇವೆಯಿಂದ ಅಮಾನತ್ತು

ಬೀದರ್/ ಬಸವಕಲ್ಯಾಣ : ಸಹ ಶಿಕ್ಷಕಿ ಶ್ರೀಮತಿ ಶ್ರೀದೇವಿ ಯವರು ಸರ್ಕಾರಿ ಪ್ರೌಢ ಶಾಲೆ ಗೌರ ತಾ॥ ಬಸವಕಲ್ಯಾಣ -ಜಿ|| ಬೀದರ್ ಈ ಪ್ರೌಢ ಶಾಲೆಯಲ್ಲಿ 2012 ರಿಂದ ಸೇವೆ ಸಲ್ಲಿಸುತ್ತಿದ್ದರು. ಶಾಲೆಗೆ ಬಂದಾಗಿನಿಂದ ಇವರು ಬೋಧಿಸುವ ಪಾಠ ಯಾವ ಮಕ್ಕಳಿಗೂ ಅರ್ಥವಾಗುತ್ತಿಲ್ಲ. ವಿಷಯದ ಬಗ್ಗೆ ಕೇಳಲು ಹೋದಾಗ ಹೋದಾಗ ಮಕ್ಕಳಿಗೆ ತರಗತಿಯಲ್ಲಿಯೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸುತ್ತಿದ್ದರು. ಇವರ ಬೋಧನೆ ಬಗ್ಗೆ ಗ್ರಾಮಸ್ಥರು ಅನೇಕ ಸಲ ಮೇಲಾಧಿಕಾರಿಗಳಿಗೆ ಹಾಗೂ ಇಲ್ಲಿನ ಮುಖ್ಯೋಪಾಧ್ಯಾಯರಿಗೆ ದೂರನ್ನು ನೀಡಿದರೂ ಯಾವುದೇ ರೀತಿಯ ಬದಲಾವಣೆ ಆಗಿರುವುದಿಲ್ಲ. ಸದರಿ ಶಿಕ್ಷಕಿಯರು ಬಸವಕಲ್ಯಾಣ ತಾಲೂಕಿನ ಸಾವಿತ್ರಿಬಾಯಿ ಸಂಘದ ಅಧ್ಯಕ್ಷರಾಗಿದ್ದರು. ಇವರಿಂದಾಗಿ ಗ್ರಾಮಸ್ಥರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಕಿಮ್ಮತ್ತು ಕೊಡದೆ ಮನಬಂದಂತೆ ಹೀಯಾಳಿಸಿ, ಬೈದು ಅವಮಾನಿಸುತ್ತಿದ್ದರು.

ಆದ್ದರಿಂದ ಸದರಿ ಶಿಕ್ಷಕಿಯರನ್ನು ಅಮಾನತ್ತು ಮಾಡಿ ಶಾಲೆಯ ಮಕ್ಕಳ ಭವಿಷ್ಯ ಕಾಪಾಡಬೇಕೆಂದು ವಿನಂತಿಸಿರುವುದರಿಂದ ಪ್ರಾಥಮಿಕ ವಿಚಾರಣೆ ನಡೆಸಿ ಸದರಿ ಶಿಕ್ಷಕಿಯರು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021 (ತಿದ್ದುಪಡಿ ನಿಯಮ) ಗಳನ್ನು ಹಾಗೂ ನಿಯಮ 1,2 ಮತ್ತು 3 ಉಲ್ಲಂಘಿಸಿ ನೌಕರನಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆ.
ಈ ವಿಷಯಗಳನ್ನು ಮುಖ್ಯ ಗುರುಗಳು, ಸಹ ಶಿಕ್ಷಕರು,ಎಸ್.ಡಿ.ಎಂ.ಸಿ. ಅಧ್ಯಕ್ಷರ ಹೇಳಿಕೆಯಿಂದ ಸಾಬಿತಾಗಿರುವ ವರದಿಯನ್ನು ಬಸವಕಲ್ಯಾಣದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ಧವೀರಯ್ಯಾ ರುದನೂರ ರವರು ಸಲ್ಲಿಸಿರುವ ಪ್ರಯುಕ್ತ ಶ್ರೀ ಸುರೇಶ ಹೆಚ್.ಜಿ. ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೀದರ ರವರು ಆದೇಶ ಪತ್ರ ಸಂಖ್ಯೆ ಇತಿ:ಆಡಳಿತ:ದೂರು:ಶಿಸ್ತುಕ್ರಮ:58:2024-25:5098ದಿನಾಂಕ 03-11-2025 ರಂತೆ ಶಿಕ್ಷಕಿಯರಾದ ಶ್ರೀಮತಿ ಶ್ರೀದೇವಿ ರವರನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ಶ್ರೀಮತಿ ಶ್ರೀದೇವಿ ಶಿಕ್ಷಕಿಯರನ್ನು ಅಮಾನತ್ತುಗೊಳಿಸಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿದಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ, ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೀದರ ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸವಕಲ್ಯಾಣರವರಿಗೆ ಸರ್ಕಾರಿ ಪ್ರೌಢ ಶಾಲೆ ಗೌರ ತಾ| ಬಸವಕಲ್ಯಾಣದ ಎಸ್.ಡಿ.ಎಂ.ಸಿ., ಗ್ರಾಮಸ್ಥರು ಹಾಗೂ ಪಾಲಕರಿಂದ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!