ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಚುನಾವಣೆ ನಡೆದಿದ್ದು. ಎಲ್ಲಾ ಸದಸ್ಯರುಗಳು ಸೇರಿ ಒಮ್ಮತದಿಂದ ಅಧ್ಯಕ್ಷರಾಗಿ ಎನ್. ಸುರೇಶ ತಂದೆ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾಗಿ ದ್ರಾಕ್ಷಾಯಿಣೆಮ್ಮ ಗಂಡ ಮೃತ್ಯುಂಜಯ ಇವರುಗಳನ್ನು ಆಯ್ಕೆಮಾಡಿರುತ್ತಾರೆ. ಸಮುದಾಯದ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಮತ್ತು ಶಿಕ್ಷಣದಲ್ಲಿ ಸಮುದಾಯದ ಭಾಗವಹಿಸುವಿಕೆಗಾಗಿ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಹೊಂದುವ ಈ ವ್ಯವಸ್ಥೆಯನ್ನು ರಚಿಸಿದೆ. ಸದರಿ ಸಮಿತಿಯಲ್ಲಿ ಇತರರನ್ನು ಹೊರತುಪಡಿಸಿ 18 ಮುಖ್ಯ ಸದಸ್ಯರು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಾಗಿರುತ್ತಾರೆ.
ಶಾಲೆಗಳ ಉತ್ತಮ ನಿರ್ವಹಣೆಗಾಗಿ ಶೈಕ್ಷಣಿಕ ಮತ್ತು ಶಾಲಾಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಎಸ್.ಡಿ.ಎಂ.ಸಿ. ಸಮಿತಿಗಳಿಗೆ ಕೆಲವು ಕರ್ತವ್ಯಗಳನ್ನು ಹಾಗೂ ಅಗತ್ಯ ಅಧಿಕಾರಗಳನ್ನು ನೀಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸಮಿತಿಯ ಕಾರ್ಯದರ್ಶಿಗಳಾಗಿರುತ್ತಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಸುನಂದಾ ಕೊಟ್ರೇಶ್ ,ಸಹ ಶಿಕ್ಷಕರು, ಸಿ ಆರ್ ಪಿ ದುರುಗಪ್ಪ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.
ವರದಿಗಾರರು: ಎನ್ ಚಂದ್ರಗೌಡ



















