ವಿಜಯನಗರ / ಹೊಸಪೇಟೆ : ಡಿಕೆ ಶಿವಕುಮಾರ್ ಒಂದು ವೇಳೆ ಸಿಎಂ ಆದ್ರೆ ರಾಜ್ಯ ಅಧೋಗತಿಗೆ ಹೋಗುತ್ತದೆ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಉಪಲೋಕಾಯುಕ್ತ ವೀರಪ್ಪ ಹೇಳಿದಂತೆ ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರ ನಡೀತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಎಲ್ಲಾ ರೀತಿ ದಿವಾಳಿ ಎದ್ದೋಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿಗೆ ನ್ಯಾಶನಲ್ ಹೆರಾಲ್ಡ್ ಕೇಸ್ ವಿಚಾರ ಜಗಜ್ಜಾಹಿರಾಗಿದೆ. ಹಣ ನೀಡಿದ್ದೇವೆ ಅಂತ ಡಿಕೆಶಿ ಸಹೋದರರು ಒಪ್ಪಿದ್ದಾರೆ.
ಕೆಲವು ಶೇರು ಡಿಕೆಶಿ ಕೂಡಾ ನ್ಯಾಶನಲ್ ಹೆರಾಲ್ಡ್ ನಲ್ಲಿದ್ದವು.
ಡಿಕೆಶಿ ಸಿಎಂ ಆಗ್ತಾರೆ ಅಂತ ನೋಟಿಸ್ ಕೊಟ್ಟಿದ್ದಾರೆ ಅನ್ನೋ ತಪ್ಪು ತಿಳಿವಳಿಕೆ, ಇಡಿ, ಸಿಬಿಐ ತನ್ನದೇ ಕೆಲಸವನ್ನ ಮಾಡುತ್ತಾ ಬಂದಿವೆ.
ರಷ್ಯಾದ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದು ಒಪ್ಪಂದ ಮಾಡಿದ್ದಾರೆ. ಭಾರತ ಎಷ್ಟು ಬಲಿಷ್ಠ ಆಗಿದೆ ಅನ್ನೋದನ್ನು ಗೊತ್ತಾಗುತ್ತದೆ.
ಅಮೇರಿಕ ದೇಶಕ್ಕೆ ಎದುರಿಸುವ ಶಕ್ತಿ ಇರೋದು ಭಾರತಕ್ಕೆ ಮಾತ್ರ ಎಂದರು.
ಇನ್ನೂ ನಾಗೇಂದ್ರ ಸಂಪುಟಕ್ಕೆ ಸೇರ್ಪಡೆ ವಿಚಾರದಲ್ಲಿಅವರ ಪಕ್ಷದ ಮನಃಸ್ಥಿತಿ ಹೇಗಿದೆ ಎಂದು ಗೊತ್ತಿದೆ. ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಿದ ನಾಯಕನನ್ನ ಮತ್ತೇ ಸೇರ್ಪಡೆ ಮಾಡ್ತಾರೆ ಅಂದ್ರೆ ಏನ್ ಹೇಳೋದು? ಎಂದು ಮಾರ್ಮಿಕವಾಗಿ ನುಡಿದರು.
ವರದಿ : ಜಿಲಾನಸಾಬ್ ಬಡಿಗೇರ್



















