ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಂಥಾಲಯ ಮೇಲ್ವಿಚಾರಕ ಕ್ಷೇಮಾಭಿವೃದ್ಧಿ ಸಂಘದ ಸಭೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಎಂ.ಡಿ.ಕ್ಯಾಂಪಿನ ಅಲೆಮಾರಿ ಗ್ರಂಥಾಲಯ ಆವರಣದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯ ಸೋಮವಾರ ನಡೆಯಿತು.
ಎಂ.ಡಿ.ಕ್ಯಾಂಪಿನ ಗ್ರಂಥಾಲಯ ಮೇಲ್ವಿಚಾರಕ ಎಚ್.ಪಿ.ಶಿಕಾರಿರಾಮು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಮೇಲ್ವಿಚಾರಕ ವೇತನ ಜಮೆ ಮಾಡಬೇಕು. ತಿಂಗಳ ವೃತ್ತಪತ್ರಿಕೆಗಳ ಬಿಲ್ಲನ್ನು 400ರೂಪಾಯಿಗಳಿಂದ 1000ರೂಪಾಯಿಗಳಿಗೇರಿಸಬೇಕು. ಕಂಪ್ಲಿ, ಹೊಸಪೇಟೆ, ಚಿಕ್ಕಮ್ಯಾಗಳಗೇರಿಗಳ ಅಲೆಮಾರಿ/ಕೊಳಚೆ ಗ್ರಂಥಾಲಯಗಳಿಗೆ ನಿವೇಶನ ನೀಡಿ, ಕಟ್ಟಡ ನಿರ್ಮಿಸಿ ಕೊಡಬೇಕು. ಮೇಲ್ವಿಚಾರಕರು ಮೃತರಾದಲ್ಲಿ ಅನುಕಂಪದ ಆಧಾರದಡಿ ಅವಲಂಬಿತರಿಗೆ ಮೇಲ್ವಿಚಾರಕ ಹುದ್ದೆ ನೀಡಬೇಕು. ಗ್ರಂಥಾಲಯ ಮೇಲ್ವಿಚಾರಕರನ್ನು ಖಾಯಂಗೊಳಿಸುವಂತೆ ಸೇರಿ ನಾನಾ ಬೇಡಿಕೆಗಳ ಕುರಿತು ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಗ್ರಂಥಾಲಯಗಳ ಕಾರ್ಯ ನಿರ್ವಹಣೆ, ಮೇಲ್ವಿಚಾರಕರ ಭವಿಷ್ಯ ನಿಧಿ ಸೇರಿ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು.

ಆಯ್ಕೆ: ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಲ್ಲಿಪುರದ ವಿ.ಹನುಮಪ್ಪ(ಅಧ್ಯಕ್ಷ), ಎಚ್.ಪಿ.ಶಿಕಾರಿರಾಮು(ಗೌರವಾಧ್ಯಕ್ಷ), ಹೊಸಪೇಟೆಯ ಪಕ್ಕೀರಪ್ಪ ಬಾದಗಿ (ಉಪಾಧ್ಯಕ್ಷ), ಬಳ್ಳಾರಿ ಗುಡಾರನಗರದ ಡಿ.ಸುಂಕಣ್ಣ (ಪ್ರಧಾನ ಕಾರ್ಯದರ್ಶಿ),
ಕುರುಗೋಡಿನ ಮಂಗಳಗೌರಿ (ಸಹ ಕಾರ್ಯದರ್ಶಿ), ಚಿಕ್ಕಮ್ಯಾಗಳಗೇರಿಯ ಡಿ.ಪರಶುರಾಮ (ಖಜಾಂಚಿ), ಕಂಪ್ಲಿಯ ಉಮೇಶ, ಸಿರುಗುಪ್ಪದ ವೈ.ದೇವೇಂದ್ರಪ್ಪ, ಬಳ್ಳಾರಿಯ ಉಮೇಶ (ಸದಸ್ಯರು), ವೈ.ದೇವೇಂದ್ರಪ್ಪ (ರಾಜ್ಯ ಮೇಲ್ವಿಚಾರಕ ಪ್ರತಿನಿಧಿ)ಆಯ್ಕೆಗೊಂಡರು. ಬಸವನಕುಂಟೆಯ ಉಮೇಶ ಸೇರಿ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!