ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರೋಗ್ಯಕರ ಜೀವನಕ್ಕೆ ಕ್ರೀಡೆ ಅವಶ್ಯ: ಮಹಾಂತೇಶ ಕಡಿವಾಲ.

ಬಾಗಲಕೋಟೆ : ಮಾನವನ ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು ಯಾವುದೇ ಕ್ರೀಡೆ ಇರಲಿ ಅದರಿಂದ ಉತ್ತಮವಾದ ಆರೋಗ್ಯ ಉಲ್ಲಾಸ, ಉತ್ಸಾಹದೊಂದಿಗೆ ಒಳ್ಳೆಯ ಜೀವನ ನಡೆಸಬಹುದು ಎಂದು ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ಪೋರ್ಟ್ ಕ್ಲಬ್ ನವರು ಏರ್ಪಡಿಸಿದ ವಾಲಿಬಾಲ್ ಲೀಗ್ ಸೀಜನ್ 1 ರ ಬಹುಮಾನ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾಜಿ ತಾಲೂಕ ಪಂಚಾಯತ ಅಧ್ಯಕ್ಷರಾದ ಮಹಾಂತೇಶ ಕಡಿವಾಲ ಮಾತನಾಡಿದರು.
ಮಹಾಂತೇಶ ಕಡಿವಾಲ ಮಾಲೀಕತ್ವದ ರೋಹಿತ್ ಬಾಯ್ಸ್, ಮಹಮ್ಮದಸಾಬ ಭಾವಿಕಟ್ಟಿ ಯವರ ಭಾವಿಕಟ್ಟಿ ನೆಟ್ ಸ್ಪೋರ್ಟ್ಸ್, ಶಿವು ವಡ್ಡರ ರವರ ಟೆಲಿಕಾಮ ರಾಕರ್ಸ್, ಅಮರಪ್ಪ ಹಡಪದ್ ರವರ ವಿ ಎಸ್ ಸ್ಪೋರ್ಟ್ಸ್, ಮಹಾಂತೇಶ್ ಗೋಧಿ ಯವರ ಭಂಡಾರಲಿಂಗೇಶ್ವರ್, ಹಾಗೂ ಆಶೀಫ್ ಶಿಂಗನಗುತ್ತಿಯವರ ಸ್ನೇಹಜೀವಿ ಗ್ರೂಪ್ಸ್, ಸೇರಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. 1ವಾರಗಳ ಕಾಲ ನೆಡೆದ ಪoದ್ಯವಳಿಗಳು ಅತ್ಯಂತ ಆಕರ್ಷಣೀಯವಾಗಿ ನಡೆದು ಜನರ ಕಣ್ಮನ ಸೆಳೆದವು.
ಭಾವಿಕಟ್ಟಿ ನೆಟ್ ಸ್ಪೋರ್ಟ್ಸ್ ಪ್ರಥಮ ಹಾಗೂ ಟೆಲಿಕಾಮ್ ರಾಕರ್ಸ್ ದ್ವಿತೀಯ ಸ್ಥಾನ ಗಳಿಸಿದದರೆ ಉತ್ತಮ ಶಾಟರ್ ಆಗಿ ಬಸವರಾಜ್ ಜಾಲಿಹಾಳ್, ಉತ್ತಮ ಲಿಫ್ಟರ್ ಆಗಿ ಪ್ರಶಾಂತ್ ಸಜ್ಜನ ಹಾಗೂ ಉತ್ತಮ ಸೆಂಟರ್ ಪ್ಲೇಸ ನ ಆಟಗಾರಗಾಗಿ ಸಿದ್ದು ಜವಳಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಂಪಣ್ಣ ಸಜ್ಜನ, ಕಾರ್ಯಕ್ರಮ ಸಂಚಾಲಕ ಚನ್ನಪ್ಪ ಜಾಲಿಹಾಳ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ, ಕ್ರೀಡಾಳುಗಳಾದ ರುದ್ರೇಶ ವೀರಾಪುರ, ರಾಜು ಪರಾಸರ ಸೇರಿದಂತೆ ಇನ್ನಿತರರು ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ, ಯುವ ಮುಖಂಡ ವೀರೇಶ್ ಪಾಟೀಲ್, ಮಲ್ಲಪ್ಪ ಬಂಡಿ,ಬಸವರಾಜ್ ದಿವಾಣದ, ಸಂಗಯ್ಯ ಹೊರಗಿನಮಠ, ಪಂಪಯ್ಯ್ ಗುರುವಿನಮಠ ಉಪಸ್ಥಿತರಿದ್ದರು.
ಖಾಜೇಸಾಬ್ ಬನ್ನಟ್ಟಿ (ಬಳಿಗಾರ) ಮಂಜುನಾಥ ತೋಟದಸ್ವಾಮಿಮಠ ಎಲ್ಲ ಪಂದ್ಯಗಳ ವಿವರಣೆ ನೀಡಿದರು, ಮುತ್ತು ಸಜ್ಜನ ಕಾರ್ಯಕ್ರಮ ನಿರೂಪಿಸಿದರು. ಹನಮಂತ ತಳವಾರ ಸ್ವಾಗತಿಸಿದರು. ಕಾಶಿಮಸಾಬ್ ಮಸ್ಕಿ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!