ರಟಕಲ್ : ಇಂದು ರಟಕಲ್ ಗ್ರಾಮದ ಬಜಾರ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಷ, ಬ್ರ ರೇವಣಸಿದ್ಧ ಶಿವಾಚಾರ್ಯರು ಹಿರೇಮಠ ಮತ್ತು ನೀಲಕಂಠ ದೇವರು ವೀರಕ್ತ ಮಠ ಶ್ರೀ ಗಳ ನೇತೃತ್ವದಲ್ಲಿ ಮತ್ತು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರು ಶ್ರೀ ಶಿವರಾಜ್ ಚೋಕ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಘಟಕದ ಅಧ್ಯಕ್ಷರಾದ ಶರಣಬಸಪ್ಪ ಬೈರಪ್ಪ ಅವರ ನೇತೃತ್ವದಲ್ಲಿ ಶತಾಯುಷಿ ಲಿo. ಶ್ರೀ ಭೀಮಣ್ಣ ಖಂಡ್ರೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದರಲ್ಲಿ ರಟಕಲ್ ವೀರಶೈವ ಸಮಾಜದ ಮುಖಂಡರಾದ ರಾಚಯ್ಯ ಬುಕ್ಕಟಗಿ, ಚಂದ್ರಕಾಂತ್ ಸೀಗಿ, ವೀರಣ್ಣ ಗಂಗಾಣಿ, ರೇವಣಸಿದ್ಧ ಬಡಾ, ಚಂದ್ರಕಾಂತ್ ಚೌಕ, ನಾಗಣ್ಣ ಬೆಚ್ಚಟ್ಟಿ, ಮಲ್ಲಿಕಾರ್ಜುನ ಚಿಕಅಗಸಿ, ರಾಚಯ್ಯ ಕೀಣ್ಣೆ ಸಂತೋಷ್ ಭೀಮಳ್ಳಿ ಮುರುಗಪ್ಪ ನಾಗುರ, ಚಂದ್ರಕಾಂತ್ ಭೀಮಳ್ಳಿ, ಡಾಕ್ಟರ್ ಕಾಶಿನಾಥ್ ಮುಲಗೆ, ರಾಘವೇಂದ್ರ ಗುಂಡನೂರ ಸೇರಿದಂತೆ ಅನೇಕರು ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ ಎಸ್.ವಿ. ಗಂಗಾಣಿ



















