ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನವರಿ 31 ರಂದು ಪಟ್ಟಣದಲ್ಲಿ ಹಿಂದೂ ಸಮ್ಮೇಳನ.

ಹಿಂದೂ ಧರ್ಮ ಒಂದು ಧರ್ಮ ಮಾತ್ರವಲ್ಲ. ಅದು ಜನರ ಒಡನಾಟ, ಸಂಸ್ಕೃತಿ ಉಳಿವು, ಎಲ್ಲರಲ್ಲಿ ಹಿಂದೂ ಧರ್ಮದ ಕುರಿತಾದ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಜನವರಿ 31, ಶನಿವಾರದಂದು ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪನ್ನಾಲಾಲ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುಮಠಕಲ್: ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಪನ್ನಾಲಾಲ್ ಪಟೇಲ್ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಹಿಂದೂ ಧರ್ಮ ಒಂದು ಧರ್ಮ ಮಾತ್ರವಲ್ಲ. ಅದು ಜನರ ಒಡನಾಟ, ಸಂಸ್ಕೃತಿ ಉಳಿವು, ಎಲ್ಲರಲ್ಲಿ ಹಿಂದೂ ಧರ್ಮದ ಕುರಿತಾದ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಜನವರಿ 31, ಶನಿವಾರದಂದು ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಹೇಳಿದರು.

ಮಧ್ಯಾಹ್ನ 3 ಗಂಟೆಗೆ ನಗರೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭಗೊಳ್ಳುವದು ಡೊಳ್ಳು ಕುಣಿತ, ಮಕ್ಕಳ ಸಾಂಸ್ಕೃತಿಕ ನೃತ್ಯಗಳೊಂದಿಗೆ ಭಾರತ ಮಾತೆ ಮತ್ತು ಮಹಾನ್ ವ್ಯಕ್ತಿಗಳ ಭಾವಚಿತ್ರಗಳೊಂದಿಗೆ ಶೋಭಯಾತ್ರೆ ಜರುಗುವದು ಈ ಶೋಭಾಯಾತ್ರೆಯಲ್ಲಿ ಮಠಾಧೀಶರು, ಸಮಾಜ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುತ್ತಾರೆ ಈ ಶೋಭಾಯಾತ್ರೆ ರಾಮನಗರದಲ್ಲಿ ಸಮಾಪ್ತಿಗೊಳ್ಳುತ್ತದೆ ಎಂದು ಹೇಳಿದರು.

ಶೋಭಾಯಾತ್ರೆ ನಂತರ ವೇದಿಕೆ ಕಾರ್ಯಕ್ರಮ ಜರುಗುವದು ವೇದಿಕೆಯ ಸಾನಿಧ್ಯ ಮಲ್ಲಿಕಾರ್ಜುನ ಸ್ವಾಮಿ ಗುರುಗಳು, ಜಗದ್ಗಿರಿ ಬೆಟ್ಟ, ವಕ್ತಾರರಾಗಿ ಮಲ್ಲಿಕಾರ್ಜುನ ಬಾಳಿಕಾಯಿ, ಭಾಗವಹಿಸುತ್ತಾರೆ ಎಂದು ಸಮ್ಮೇಳನದ ಉಪಾಧ್ಯಕ್ಷ ದೊಡ್ಲಾ ಪಂಡರಿ ತಿಳಿಸಿದರು.

ಮುಂದುವರೆಸಿ ಸಮ್ಮೇಳನದ ಶೋಭಾಯಾತ್ರೆಯಲ್ಲಿ 2,000 ಜನರು ಭಾಗವಹಿಸುವ ಸಾಧ್ಯತೆ ಇದ್ದು ಕಾರ್ಯಕ್ರಮದ ತದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಬಸ್ಸಪ್ಪ ಸಂಜನೊಳ, ಶ್ರೀನಿವಾಸ ಯಾದವ್, ಮಲ್ಲಿಕಾರ್ಜುನ ಹಿರೇಮಠ, ಸುಧೀರ್ ತಿವಾರಿ, ಶಿವಾನಂದ ಬೂದಿ, ಗುರುರಾಜ್ ಜೋಷಿ, ಮೋಹನ್ ಬುರಬುರೆ, ಕಿಶೋರ್ ಢಗೆ, ನರಸಿಮುಲು ಗಂಗನೊಳ, ಪ್ರವೀಣ್ ಪಟೇಲ್ ಭಾಗವಹಿಸಿದರು.

ವರದಿ: ಜೆ. ಎಸ್. ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!