ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೇಸರನೆಂಬ ಪ್ರಭೆಯ ಆಕರ

ಮೂಡಣದ ಮನೆಯೆದುರು ಕುಂಕುಮದ ರಂಗೋಲಿ
ನೇಸರನ ಮೊಗದೊಳಗೆ ಶಾಂತ ಭಾವ
ಜಡತನದ ಜಾಡ್ಯವದೋ ಕಳಚುತಿದೆ ಕರಗುತಿದೆ
ದಿನಕರನ ತಂಪುನಗೆ ನಿತ್ಯೋತ್ಸವ II೧II

ಕತ್ತಲೆಯ ಕಸಗುಡಿಸಿ ಮುನ್ನಡೆದ ದಿನಮಣಿಯು
ಜೀವಸಂಕುಲ ಬಾಳ ಕೊಳಲೂದಿದ
ಅರಿವು-ಆನಂದಗಳ ಕಿರಣಗಳ ಹೊಳೆ ಹರಿಸಿ
ಪಡುವಣಕೆ ಪಯಣಿಸಲು ರಥವೇರಿದ II೨II

ಬಾನಿನಲಿ ಭಾಸ್ಕರನ…ನಿತ್ಯ ಸಾವಿರ ಲೀಲೆ
ಭುವಿಯೊಳಗೆ ಹೊಸತನದ ರಸಸಿಂಚನಾ
ಚಲಿಸುತಿದೆ ಈ ಬದುಕು ಕತ್ತಲೆಯ ಗಡಿದಾಟಿ
ಕೆಲವೆಡೆಗೆ ರಣಬಿಸಿಲು ಆರ್ತ ಗಾನ II೩II

ಕೈಮುಗಿದು ಶರಣಾದೆ..ಶಕ್ತಿಸಂಚಯದೇವ
ಉದಯ- ಅಸ್ತದಿ ಮನದಿ ನೂರು ಭಾವ
ಹೊಂಗಿರಣ – ಸುಡು ಕಿರಣ ಅನುಭವವು ನೂರಾರು
ನಿನ್ನಿಂದಲೇ ಉಳಿವು ಸಕಲ ಜೀವ II೪II

ದೇವನೆಲ್ಲಿಹನೆಂದು ನಾಸ್ತಿಕರು ಕೇಳಿದರೆ
ಪ್ರಭು ಭಾಸ್ಕರನ ತೋರಿ ಕೈ ಮುಗಿವೆನು
ಮುಚ್ಚಿರುವ ಕಂಗಳಿಗೆ ಜಗವೇ ಕತ್ತಲೆ ಕೂಪ
ಕಣ್ದೆರೆದು ನೋಡಿರೋ ಕರೆ ಕೊಡುವೆನು II೫II

ನೇಸರನ ಕಾಯಕದಿ ಬೇಸರವು ಇನಿತಿಲ್ಲ
ಸರ್ವರಿಗೂ ಸಮಬಾಳು ಸಾರುವವನು
ಸರ್ವರಿಗೂ ಸಮಕೂಳು ಪಡೆಯಲಿಕೆ ಚೈತನ್ಯ
ಮಳೆ ಸುರಿಸಿ ಪಡುವಣದಿ ಮರೆಯಾದನು
(ಬಾಳ ಪ್ರೀತಿಯ ಕಲಿಸಿ ಗುರುವಾದನು) II೬II

  • ರಮೇಶ ಹೆಗಡೆ ಕೆರೆಕೋಣ
    ಶಿಕ್ಷಕರು ತೆರಕನಹಳ್ಳಿ (ಶಿರಸಿ).
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!