ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ ಮಹಾಶಿವರಾತ್ರಿ : ಶಿವಾವತಾರಿ ಪರಮಾನಂದನ ಜಾತ್ರೆ

ಬಾಗಲಕೋಟೆ – ಮುಧೋಳ : ಶಿವನು ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿ ದಿನದಂದು ನಾಡಿನಾದ್ಯಂತ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದಲ್ಲಿ ಶಿವಾವತಾರಿ ಸಿದ್ಧ ಪುರುಷ, ಪರಮಾನಂದ ದೇವರ ಜಾತ್ರೆ-ಮಹಾಶಿವರಾತ್ರಿ ಮಹಾ ಮಹೋತ್ಸವವು ಇದೆ ರವಿವಾರ ದಿ .15 ರಿಂದ ಗುರುವಾರ 19 ರ ವರೆಗೆ 5 ದಿನ ವಿಜ್ರಂಭಣೆಯಿಂದ ಜರುಗಲಿದೆ.
ರವಿವಾರ ದಿ. 15ರಂದು ಕತೃ೯ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಶಿವರಾತ್ರಿ, ಶಿವಯೋಗ ಆಚರಣೆ ಜರುಗುವುದು.
ಇಲ್ಲಿಯ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಸಿದ್ಧಾರೂಢರ ಪಾರಾಯಣ, ಸಿದ್ಧಾರೂಢರ ಕಥಾಮೃತ, ಓಂ ನಮಃ ಶಿವಾಯ ಮಹಾಮಂತ್ರ ಪಠಣ, ಭಜನೆ ಇಡೀ ದಿನ ಜರುಗುವುದು. ಸೋಮವಾರ ದಿ‌. 16ರಂದು ಶ್ರೀ ಪರಮಾನಂದನ ಆಲಯದಲ್ಲಿ ಮುಂಜಾನೆ 7 ಗಂಟೆಗೆ ಕರಿ ಕಟ್ಟುವುದು. ಅಮಾವಾಸ್ಯೆಯ ದಿನ ಮಹಾ ನೈವೇದ್ಯ ನಡೆಯುವದು. ಸಂಜೆಗೆ ದೇವರುಗಳನ್ನು ಬರಮಾಡಿಕೊಳ್ಳುವದು. ನಂತರ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳವಾರ ದಿ .17 ರಂದು ದೇವರ ಶುಭ ನುಡಿ [ಭವಿಷ್ಯ ವಾಣಿ ] ಟಗರಿನ ಕಾಳಗ, ತೆರೆಬಂಡಿ ಸ್ಪರ್ಧೆಗಳು ನಡೆಯುವವು. ಸಂಜೆಗೆ ಸಹಸ್ರ ದೀಪೋತ್ಸವ, ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯುವದು ಬುಧವಾರ ದಿ.18ರಂದು ಪಲ್ಲಕ್ಕಿ ಉತ್ಸವ, ಮದ್ದು ಸುಡುವುದು ರಾತ್ರಿ 10.30ಕ್ಕೆ “ಮಾರಿ ಕಣ್ಣು ಹೋರಿ ಮ್ಯಾಲೆ ” ಸಂಗ್ಯಾ -ಬಾಳ್ಯಾ, ಬಡವ ಸಾಕಿದ ಬಹದ್ದೂರ್ ಹುಲಿ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಗುರುವಾರ ದಿ.19 ರಂದು ಉಡಿ ತುಂಬುವ ಕಾರ್ಯಕ್ರಮ ನಡೆಯುವುದು.
ಸಂಜೆ 4 ಪರಸ್ಥಳದಿಂದ ಬಂದ ದೇವರುಗಳನ್ನು ಬೀಳ್ಕೊಡುವುದರೊಂದಿಗೆ ಮಹಾಶಿವರಾತ್ರಿ ಸಂಪನ್ನಗೊಳ್ಳುವುದು.
ಪ್ರತಿ ದಿನ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಬೆಳಿಗ್ಗೆ ಧಾರ್ಮಿಕ ಚಿಂತನ ಕಾರ್ಯಕ್ರಮ ಜರುಗುವುದು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಎಲ್ ಶ್ರೀನಿವಾಸ ಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!