ಹುನಗುಂದ : ಪ್ರಕೃತಿಯನ್ನೇ ದೇವರೆಂದು ಪೂಜಿಸಬೇಕು ಎಂದು ಹೇಳಿದ ಮಹಾನ್ ಸಂತ ಸೇವಾಲಾಲರು ಎಂದು ಅಮೀನಗಡದ ಸಾಹಿತಿ ಯೋಗೇಶ ಲಮಾಣಿ ಹೇಳಿದರು.
ಅವರು ತಾಲೂಕಾ ಆಡಳಿತ ಹುನಗುಂದ ವತಿಯಿಂದ ನಡೆದ ಸಂತ ಶ್ರೀ ಸೇವಾಲಾಲರ 287 ನೇ ಜಯಂತಿಯ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಪ್ರಕೃತಿಯಲ್ಲಿರುವ ಪ್ರತಿಯೊಂದನ್ನು ಗೌರವಿಸಿ, ಪೂಜಿಸಬೇಕು ಅವುಗಳನ್ನು ರಕ್ಷಿಸಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಸಂತ ಸೇವಾಲಾಲರು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಹುನಗುಂದ ತಾಲೂಕಾ ನೌಕರರ ಸಂಘದ ಅಧ್ಯಕ ಸತೀಶ ರಾಠೋಡ ಮಾತನಾಡಿ ಬಂಜಾರಾ ಸಮಾಜದ ಧರ್ಮಗುರು ಸೇವಾಲಾಲರ ತತ್ವ ಸಿದ್ದಾಂತಗಳು ಇಂದಿನ ಪೀಳಿಗೆ ಅಳವಡಿಸಿಕೊಂಡು ಮುನ್ನಡೆಯಬೇಕು ಈ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಲಾಲಪ್ಪ ಲಮಾಣಿ ಅವರು ಸಂತ ಸೇವಾಲಾಲರ ಗುಣಗಾನ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಆಡಳಿತದ ಉಪ ತಹಶೀಲ್ದಾರ ಮಹೇಶ ಸಂದಿಗವಾಡ ಮಾತನಾಡಿ ಧರ್ಮದ ದಾರಿಯಲ್ಲಿ ನಡೆಯಬೇಕು ಧರ್ಮದ ದಾರಿಯಲ್ಲಿ ನಡೆದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಜಗತ್ತಿಗೆ ತೋರಿಸಿದ ಮಹಾನ್ ದಾರ್ಶನಿಕ ಸೇವಾಲಾಲರು ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಮೇಲೆ ನಾಯಕರಾದ ಭೀಮಪ್ಪ ನಾಯಕ, ಹೋಮಸಿಂಗ್ ನಾಯಕ, ಶಂಕ್ರಪ್ಪ ಚವ್ಹಾಣ, ಇದ್ದರು.
ಚಂದ್ರಕಾಂತ ಚವ್ಹಾಣ, ಗೋಪಾಲ ಚವ್ಹಾಣ, ರವಿ ರಾಠೋಡ, ಲಕ್ಷ್ಮಣ ಚವ್ಹಾಣ, ಹಾಮಪ್ಪ ಲಮಾಣಿ, ಪ್ರಕಾಶ ಚವ್ಹಾಣ , ಸಂತೋಷ ಚವ್ಹಾಣ, ಆನಂದ ರಾಠೋಡ ಸೇರಿದಂತೆ ತಾಲೂಕಾ ಆಡಳಿತ ಸಿಬ್ಬಂದಿ ವರ್ಗ, ಹುನಗುಂದ ತಾಲೂಕಿನ ತಾಂಡಾದ ಹಿರಿಯರು ಯುವಕರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ
ಹುನಗುಂದ : ಪ್ರಕೃತಿಯನ್ನೇ ದೇವರೆಂದು ಪೂಜಿಸಬೇಕು ಎಂದು ಹೇಳಿದ ಮಹಾನ್ ಸಂತ ಸೇವಾಲಾಲರು ಎಂದು ಅಮೀನಗಡದ ಸಾಹಿತಿ ಯೋಗೇಶ ಲಮಾಣಿ ಹೇಳಿದರು.
ಅವರು ತಾಲೂಕಾ ಆಡಳಿತ ಹುನಗುಂದ ವತಿಯಿಂದ ನಡೆದ ಸಂತ ಶ್ರೀ ಸೇವಾಲಾಲರ 287 ನೇ ಜಯಂತಿಯ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಪ್ರಕೃತಿಯಲ್ಲಿರುವ ಪ್ರತಿಯೊಂದನ್ನು ಗೌರವಿಸಿ, ಪೂಜಿಸಬೇಕು ಅವುಗಳನ್ನು ರಕ್ಷಿಸಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಸಂತ ಸೇವಾಲಾಲರು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಹುನಗುಂದ ತಾಲೂಕಾ ನೌಕರರ ಸಂಘದ ಅಧ್ಯಕ ಸತೀಶ ರಾಠೋಡ ಮಾತನಾಡಿ ಬಂಜಾರಾ ಸಮಾಜದ ಧರ್ಮಗುರು ಸೇವಾಲಾಲರ ತತ್ವ ಸಿದ್ದಾಂತಗಳು ಇಂದಿನ ಪೀಳಿಗೆ ಅಳವಡಿಸಿಕೊಂಡು ಮುನ್ನಡೆಯಬೇಕು ಈ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಲಾಲಪ್ಪ ಲಮಾಣಿ ಅವರು ಸಂತ ಸೇವಾಲಾಲರ ಗುಣಗಾನ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಆಡಳಿತದ ಉಪ ತಹಶೀಲ್ದಾರ ಮಹೇಶ ಸಂದಿಗವಾಡ ಮಾತನಾಡಿ ಧರ್ಮದ ದಾರಿಯಲ್ಲಿ ನಡೆಯಬೇಕು ಧರ್ಮದ ದಾರಿಯಲ್ಲಿ ನಡೆದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಜಗತ್ತಿಗೆ ತೋರಿಸಿದ ಮಹಾನ್ ದಾರ್ಶನಿಕ ಸೇವಾಲಾಲರು ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಮೇಲೆ ನಾಯಕರಾದ ಭೀಮಪ್ಪ ನಾಯಕ, ಹೋಮಸಿಂಗ್ ನಾಯಕ, ಶಂಕ್ರಪ್ಪ ಚವ್ಹಾಣ, ಇದ್ದರು.
ಚಂದ್ರಕಾಂತ ಚವ್ಹಾಣ, ಗೋಪಾಲ ಚವ್ಹಾಣ, ರವಿ ರಾಠೋಡ, ಲಕ್ಷ್ಮಣ ಚವ್ಹಾಣ, ಹಾಮಪ್ಪ ಲಮಾಣಿ, ಪ್ರಕಾಶ ಚವ್ಹಾಣ , ಸಂತೋಷ ಚವ್ಹಾಣ, ಆನಂದ ರಾಠೋಡ ಸೇರಿದಂತೆ ತಾಲೂಕಾ ಆಡಳಿತ ಸಿಬ್ಬಂದಿ ವರ್ಗ, ಹುನಗುಂದ ತಾಲೂಕಿನ ತಾಂಡಾದ ಹಿರಿಯರು ಯುವಕರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ



















