ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಚಂಕರ ತಂಡದವರಿಂದ ಗಮಕ ಕಾರ್ಯಕ್ರಮವನ್ನು ಭಾನುವಾರ ಸಂಜೆ ಏರ್ಪಡಿಸಲಾಗಿತ್ತು.
ಖ್ಯಾತ ಗಮಕಿ ಡಾ. ಖಾಸೀಮ್ ಮಲ್ಲಿಗೆಮಡುವು ಅವರಿಂದ ವಾಚನ, ವೀರನಾರಾಯಣ ಅವರಿಂದ ವ್ಯಾಖ್ಯಾನ ಹಾಗೂ ಶ್ರೀಮತಿ ಸುಧಾ ಮಂಜುನಾಥ್ ಕಥಾ ನಿರೂಪಣೆಯಿತ್ತು. ಮಾತಿನ ಮನೆಯ ರಾ ಸು ವೆಂಕಟೇಶ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳಲ್ಲಿ ಇದು ಮಾತಿನ ಮನೆಯ 123ನೆಯ ಕಾರ್ಯಕ್ರಮ ಎಂದು ತಿಳಿಸಿದರು.
ಶ್ರೀಮತಿ ಅಶ್ವಿನಿ ಮುರಳೀಧರ್ ಅವರು ಚಂಕರ ತಂಡದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ನಂತರ ಮೂವರು ಕಲಾವಿದರನ್ನು ಮಾತಿನ ಮನೆಯ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಶರಧಿ ಹುಣಸವಾಡಿ ಅವರಿಂದ ಪ್ರಾರ್ಥನೆಯಿತ್ತು.
ಸಹನಾ ರಾಜೇಶ್ ಅವರು ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್.



















