ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಅಯ್ಕೆ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮ ಪಂಚಾಯತಿಯ ಎರಡನೇ ಅವಧಿ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯನ್ನು ಚುನಾವಣಾ ಅಧಿಕಾರಿಯಾದ ಜಗದೀಶ ದಿಗಡೂರ್ ಸಮಾಜ ಕಲ್ಯಾಣ ಇಲಾಖೆ ಕೂಡ್ಲಿಗಿ ಇವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು.
ಈ ಗ್ರಾಮ ಪಂಚಾಯತಿಯ ಒಟ್ಟು 14 ಜನ ಸದಸ್ಯರಿದ್ದು ಈ ಎರಡನೇ ಅವಧಿ ಚುನಾವಣೆಯಲ್ಲಿ 11 ಜನ ಸದಸ್ಯರು ಮಾತ್ರ ಹಾಜರಿದ್ದರು.
ಈ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬುಳ್ಳವರ್ ಸುರೇಶ‌ ಮತ್ತು
ಉಪಾಧ್ಯಕ್ಷರಾಗಿ ಟಿ.ಕೊಟ್ರಮ್ಮ ಗಂಡ ಚೌಡಪ್ಪ, ಅವಿರೋಧವಾಗಿ ಆಯ್ಕೆಯಾದರು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಮಲ್ಲನಾಯಕನಹಳ್ಳಿ ದೊಡ್ಡರಾಮಣ್ಣ ಹಾಗೂ ನಾಗರಕಟ್ಟಿ ಬಣಕಾರ ಕೊಟ್ರೇಶಪ್ಪರವರು ನೂತನ ಅದ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಮಾಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು.
ನಂತರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾದ ಬುಳ್ಳವರ್ ಸುರೇಶ್ ರವರು ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರಿಗೆ ಹಾಗೂ ಗ್ರಾಮದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿಗಳಾದ ಲತಾಬಾಯಿ ಗ್ರಾಮ ಪಂಚಾಯತಿ ಸಿಬ್ಬಂದಿ ಉಜ್ಜಿನಿ ಉಪ ವಿಭಾಗ ಪೋಲಿಸ್ ಠಾಣೆ ಪಿ ಎಸ್ ಐ,ಮಲಿಕ್ ಸಾಹೇಬ್ ಪೋಲಿಸ್ ಸಿಬ್ಬಂದಿ ಹಾಗೂ ಮುಖಂಡರುಗಳಾದ ವಡ್ಡರಹಳ್ಳಿ ಕಲ್ಲೇಶಿ,ಒಣ್ಣಿಕೇರಿ ಮಂಜುನಾಥ,ವಿ.ಲೋಕಪ್ಪ,ಬೀಡಗುಡ್ಡದ ತಿಮ್ಮಣ್ಣ, ಎಂ.ಉಜ್ಜಿನಪ್ಪ,ಬಂಗಾರಿ ವೀರೇಶಿ,ಎಸ್.ಟಿ.ಡಿ. ತಿಮ್ಮಣ್ಣ,ಡಾಕ್ಟರ್ ವೆಂಕಟೇಶಿ,ಬಿ ರೇವಣಸಿದ್ದಪ್ಪ, ಶೆಟ್ಟಿ ಪ್ರಕಾಶ,ಬೋರ ಮಂಜಣ್ಣ,ಬೀಡಗುಡ್ಡದ ಹುಲಗಪ್ಪ,ದುರ್ಗಾ ದಾಸ್,ಪರುಶುರಾಮ ಉಪಸ್ಥಿತರಿದ್ದರು.
ವರದಿ-ಬಿ.ಮಾರುತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ