ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಣ್ಣು ಮುಚ್ಚಿ ಕುಳಿತ ತಾಲೂಕ ವೈದ್ಯಾಧಿಕಾರಿ ರಮೇಶ್ ಗುತ್ತೇದಾರ್

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರವಾಳ ವ್ಯಾಪ್ತಿಯಲ್ಲಿ ಬರುವ ಉಪ ಕೇಂದ್ರ ಹೊತಪೇಟ, ಸುಮಾರು ತಿಂಗಳುಗಳಿಂದ ಆರೋಗ್ಯ ಕೇಂದ್ರ ತೆರೆಯದೆ ಇರುವ ಸಿಬ್ಬಂದಿಗಳ ಮೇಲೆ ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ ಬಸ್ಸು ನಟೇಕಾರ್ ಆಗ್ರಹಿಸಿದರು.
ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ ಬಸ್ಸು ನಾಟೇಕಾರ್ ಅವರು ಮಾತನಾಡಿ ತಿಂಗಳುಗಳು ಕಳೆದರೂ ಶಿರವಾಳ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರವಾಳ ಹೊತಪೇಟ ಉಪ ಕೇಂದ್ರ ತೆರೆಯದೆ ಇವರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು ನಾವುಗಳು ಮೌಖಿಕವಾಗಿ ಅಧಿಕಾರಿಗಳಿಗೆ ಹೇಳಿದಾಗ ದಿನಾಂಕ 8/10/2023 ರಂದು ಹೊತಪೇಟೆ ಕೇಂದ್ರದ ಸಿಬ್ಬಂದಿಗಳಿಗೆ ಕಾರಣ ಹೇಳುವ ನೋಟಿಸ್ ನೀಡಿದ್ದೀರಿ ಆದರೆ ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದ ಕಾರಣ ಹಾಗೂ ಹಳ್ಳಿಯಲ್ಲಿ ಇರತಕ್ಕಂತಹ ಬಡ ಜನರು ಕೂಲಿ ಕಾರ್ಮಿಕರು ಉಪ ಕೇಂದ್ರ ಇದ್ದರೂ ತಾತ್ಕಾಲಿಕ ಚಿಕಿತ್ಸೆ ದೊರೆಯುತ್ತಿಲ್ಲ ಆದರೆ ನೀವು ನೀಡಿದ ನೋಟೀಸಿಗೆ ಬೆಲೆ ಕೊಡದ ಹೊತಪೇಟ ಉಪ ಕೇಂದ್ರದ ಸಿಬ್ಬಂದಿಗಳಿಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಆದರೆ
ಇಲ್ಲಿವರೆಗೂ ಯಾವುದೇ ಮನವಿ ಪತ್ರ ಕೊಟ್ಟರೂ ಸ್ಪಂದಿಸದೆ ಇರುವ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ದಿನಾಂಕ 8/11/2023 ಒಳಗಾಗಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದಲ್ಲಿ ದಿನಾಂಕ 15/11/2023 ರಂದು ತಮ್ಮ ಕಾರ್ಯಾಲಯದ ಮುಂದೆ ನಮಗೆ ನ್ಯಾಯ ಸಿಗೋವರೆಗೂ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರಾದ ಬಸು ನಟೇಕಾರ್ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲರಾದ ಎಚ್.ಆರ್.ಬಡಿಗೇರ್,ಜಿಲ್ಲಾ ಸಂಘಟನಾ ಸಂಚಲರಾದ ಭೀಮರಾಯ.ಆರ್.ಕರ್ಕೊಳಿ,ಸಂಘಟನಾ ಸಂಚಾಲಕರಾದ ಜಿಂದು ಹೋಲಿ ಸಾಬ್ ಇಬ್ರಾಂಪುರ್,ರಾಯಪ್ಪ ಕಂಚನಕವಿ,ಕಂಡಪ್ಪ ನಾಟೇಕರ್,ಭೀಮರಾಯ ರಾಜಾಪುರ,ಸುಭಾಷ್ ಹೊತಪೆಟ,ಅಯ್ಯಪ್ಪ ಅಚ್ಕೇರಿ,ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ