ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿನಿಮೀಯ ರೀತಿಯಲ್ಲಿ ವಕೀಲರ ಬರ್ಬರ ಹತ್ಯೆ: ಆರೋಪಿಗಳ ಬಂಧನಕ್ಕೆ ವಕೀಲರಿಂದ ಒತ್ತಾಯ

ಯಾದಗಿರಿ:ಕಲ್ಬುರ್ಗಿ ನಗರದಲ್ಲಿ ಹಾಡುಹಗಲೆ ನ್ಯಾಯವಾದಿ ಒಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ನಿನ್ನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕ ಗಾಂಧಿ ವೃತ್ತದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ನ್ಯಾಯವಾದಿ ಈರಣ್ಣಗೌಡ ನ್ಯಾಯಾಲಯಕ್ಕೆ ದ್ವಿಚಕ್ರದ ಮೇಲೆ ಹೋಗುವಾಗ ಅಪಾರ್ಟ್ಮೆಂಟ್ ನ ಕೂಗಳತೆಯ ದೂರದಲ್ಲಿ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನವನ್ನು ತಡೆದು ಕಣ್ಣಿಗೆ ಖಾರದ ಪುಡಿ ಎರಚಿದರು.
ಖಾರದ ಪುಡಿ ಎರಚಿದ ಕೂಡಲೇ ನ್ಯಾಯವಾದಿ
ಈರಣ್ಣಗೌಡ ದ್ವಿಚಕ್ರ ವಾಹನವನ್ನು ಬಿಟ್ಟು ಅಪಾರ್ಟ್ಮೆಂಟ್ ನ ಕಡೆ ಓಡಲಾರಂಭಿಸಿದರು.ಇಬ್ಬರು ಹಂತಕರು ಹರಿತವಾದ ಕತ್ತಿಯನ್ನು ಹಿಡಿದು ಬೆನ್ನಟ್ಟಿ ಅಪಾರ್ಟ್ಮೆಂಟ್ ನ ಮೂಲೆಯೊಂದರಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾದರು ಎನ್ನಲಾಗಿದೆ ಪರಾರಿಯಾದ ದೃಶ್ಯ ಸಿಸಿ ಸಿಸಿಯಲ್ಲಿ ಸೆರೆಯಾಗಿದೆ.
ಪರಾರಿಯಾದ ಘಟನೆಯು ನಗರದ ಜೇವರ್ಗಿ ರಸ್ತೆಯ ಸಾಯಿ ಮಂದಿರ ಗಂಗಾ ವಿಹಾರ ಅಪಾರ್ಟ್ಮೆಂಟ್ ನಲ್ಲಿ ಗುರುವಾರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಮೃತ ನ್ಯಾಯವಾದಿ ಈರಣ್ಣಗೌಡ ತಂದೆ ಅಂಬರಾಯ್ ಪೋಲಿಸ್ ಪಾಟೀಲ ಉದನೂರ್ ಅವರ ವಯಸ್ಸು 41 ಎಂದು ಗುರುತಿಸಲಾಗಿದೆ.
ಹಾಡುಹಗಲಲ್ಲೆ ನ್ಯಾಯವಾದಿ ಒಬ್ಬರನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ,ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾದ ಹಂತಕರನ್ನು 24 ಗಂಟೆಯಲ್ಲೆ ಬಂಧಿಸಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕು ಪದಾಧಿಕಾರಿಗಳು ರಮಾನಂದ ಕವಲಿ, ಹಣಮಂತ್ರಾಯ ಕಟ್ಟಿಮನಿ,ನಂದಕುಮಾರ್ ಕನ್ನೆಳ್ಳಿ, ಮಲ್ಲಯ್ಯ ನಾಯಕ,ಮಲ್ಲಿಕಾರ್ಜುನ ಮಂಗಿಹಾಳ, ನಿಂಗಣ್ಣ ಚಿಂಚೋಡಿ,ದೇವಿಂದ್ರಪ್ಪ ಬೇವಿನಕಟ್ಟಿ, ಸಂಗಣ್ಣ ಬಾಕಲಿ,ಗೋಪಾಲ್ ವಜ್ಜಲ,ನಾಗಪ್ಪ ಚವಲಕರ್,ಅಶೋಕ ಕವಲಿ,ಬಲಭೀಮ ನಾಯಕ ದೇವಾಪುರ ಹಾಗೂ ಹಿರಿಯ ವಕೀಲರು ಉಪಸ್ಥಿತರಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ