ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಂಬೇಡ್ಕರರು ಶೋಷಿತರ ಪರವಾಗಿ ಹೋರಾಡಿದ ವಿಶ್ವ ನಾಯಕ:ಡಾ.ಚಂದ್ರಶೇಖರಪ್ಪ ವ್ಯಾಕರನಾಳ

ರಾಯಚೂರು:ಲಿಂಗಸುಗೂರು ತಾಲೂಕು ನಾಗಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ್ ವ್ಯಾಕರನಾಳ ಅವರು ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಹೋರಾಡಿದ ನಾಯಕ ನೊಂದವರ ಆಶಾಕಿರಣ,ಅವರು ಕೊಟ್ಟ ಸಂವಿಧಾನಾತ್ಮಕ ಅವಕಾಶಗಳಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಲಿಂಗಸುಗೂರಿನ ಡಾ.ಸುಧಾಮೂರ್ತಿ ಇನ್ಫೋ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಡಾ.ಚಂದ್ರಶೇಖರಪ್ಪ ವ್ಯಾಕರನಾಳ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಇಂದು ಸರ್ಕಾರಿ ಪ್ರೌಢಶಾಲೆ ನಾಗಲಾಪುರದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸರ್ವರ ಏಳಿಗೆಯ ಆಲೋಚನೆಯ ಮಹಾ ನಾಯಕ,ಶೋಷಿತರ ಬಾಳಿಗೆ ಬೆಳಕಾಗಿದ್ದು,ಕೇವಲ ಕೆಳವರ್ಗದವರಷ್ಟೇ ಅಲ್ಲ ಮೇಲ್ವರ್ಗದವರಿಗೂ ಆದರ್ಶ ಎಂಬುದು ಅರಿತುಕೊಳ್ಳಬೇಕಾದ ವಿಷಯ ಎಂದರು.ದೀನ ದಲಿತರು,ಬಡವರು,ಶ್ರಮಿಕರು,ಕಾರ್ಮಿಕರು ಹೀಗೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನಬದ್ಧ ಹಕ್ಕುಗಳನ್ನಾಗಿ ನೀಡಿ ಸಾಮಾಜಿಕ ವ್ಯವಸ್ಥೆಯ ಒಗ್ಗೂಡುವಿಕೆಗೆ ಶ್ರಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ ಕುಲಕರ್ಣಿಯವರು ಮಾತನಾಡಿ ಅಂಬೇಡ್ಕರ್ ರವರ ಜಯಂತಿಯಂದು ನಮ್ಮ ಶಾಲೆಯ ಮೊದಲ ಬ್ಯಾಚ್ ನ ವಿದ್ಯಾರ್ಥಿ ಸಾಧನೆ ಮಾಡಿ ಇಂದು ಸನ್ಮಾನಕ್ಕೆ ಅಣಿಯಾಗಿದ್ದು ಎಲ್ಲರಿಗೂ ಹೆಮ್ಮೆಯ ಸಂಗತಿ. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿಯ ವಿಷಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ನಾಗರಾಜ್ ಪಾಟೀಲ್,ಬಬಲೇಶ್, ಶಿವಲಿಂಗಯ್ಯ,ಚೆನ್ನಪ್ಪ ಶೆಟ್ಟರ್,ಬಿ.ಎಸ್.ಬೇನಾಳ ಉಪಸ್ಥಿತರಿದ್ದರು.

ವರದಿ-ಬಸವರಾಜ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ