ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅರಣ್ಯ ಇಲಾಖೆ ಜಮೀನು ಮತ್ತು ರಾಜ್ಯ ಹೆದ್ದಾರಿ ರಸ್ತೆ ಯನ್ನು ಅತಿಕ್ರಮಣ ಮಾಡಿದ ಲೂಟಿಕೋರರಿಗೆ ಕಾನೂನು ಕ್ರಮ ಯಾವಾಗ? ಶಿವಣ್ಣ ಪರಂಗಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದ ಸರ್ವೆ ನಂಬರ್ 502-5,3,7 ಜಮೀನನ್ನು ವಾಸದ ಉದ್ದೇಶಕ್ಕಾಗಿ ಬಿನ್ ಶೇತ್ಕಿ ಜಮೀನನಾಗಿ ಭೂ ಪರಿವರ್ತನೆ ಮಾಡುತ್ತಿದ್ದು, ಸದರಿ ಜಮೀನಿನ ಸುತ್ತಮುತ್ತ ಇರುವ ಅರಣ್ಯ ಇಲಾಖೆಯ ಜಮೀನನ್ನು ಮತ್ತು ರಾಜ್ಯ ಹೆದ್ದಾರಿಯ ರಸ್ತೆ ಮತ್ತು ರಾಂಪುರ್ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಅತಿಕ್ರಮಿಸಿಕೊಂಡು ಲೇಔಟ್ ಮಾಡುತ್ತಿರುವುದರಿಂದ ಬಿನ್ ಶೇತ್ಕಿ ಆದೇಶವನ್ನು ರದ್ದುಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಣ್ಣ ಪರಂಗಿಯವರು 01-12-2023 ರಂದು ಮಾನ್ಯ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ತಹಶೀಲ್ದಾರರು 25-02-2024 ಕ್ಕೆ ತಾಲೂಕು ಭೂಮಾಪಕರು ಲಿಂಗಸುಗೂರು,ಕಂದಾಯ ನಿರೀಕ್ಷಕರು ಲಿಂಗಸಗೂರು/ಗ್ರಾಮ ಆಡಳಿತ ಅಧಿಕಾರಿಗಳು ಲಿಂಗಸುಗೂರು ಇವರಿಗೆ ಒಂದು ಮೆಮೋವನ್ನು ಕಳಿಸಿರುತ್ತಾರೆ.ಸದರಿ ಪ್ರಕರಣವನ್ನು ತುರ್ತಾಗಿ ವಿಲೇ ಮಾಡಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು ರವರಿಗೆ ವರದಿಯನ್ನು ಸಲ್ಲಿಸಬೇಕಾಗಿರುವುದರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾ ಲಿಂಗಸೂಗೂರು ಗ್ರಾಮದ ಸರ್ವೇ ನಂಬರ್ 502-5,3,7 ಜಮೀನುಗಳ ಹಾಗೂ ಸದರಿ ಜಮೀನುಗಳಿಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಜಾಗ,ಲೋಕೋಪಯೋಗಿ ಇಲಾಖೆ ಮತ್ತು ಸರಕಾರದ ಜಾಗಗಳ ಅಳತೆ ಬಗ್ಗೆ ಜಂಟಿಯಾಗಿ ಸರ್ವೆ ಮಾಡಿ ಒತ್ತುವರಿಯಾಗಿರುವ ಬಗ್ಗೆ ಸ್ಪಷ್ಟವಾದ ವರದಿಯನ್ನು ಮೂರು ದಿನಗಳ ಒಳಗೆ ಸಲ್ಲಿಸಲು ತಹಶೀಲ್ದಾರರು ಮೆಮೋ ಕೊಟ್ಟರೂ ಕೂಡಾ ತಹಶೀಲ್ದಾರರು ಹಾಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ವರ್ತಿಸುವುದು ಕಾನೂನು ಉಲ್ಲಂಘನೆಯಾಗಿದೆ.
ಈ ಕೂಡಲೇ ಮಾನ್ಯ ತಹಶೀಲ್ದಾರರು ಹಾಗೂ ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು ಅರಣ್ಯ,ರಾಜ್ಯ ಹೆದ್ದಾರಿ,ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಭೂ ಮಾಫಿಯಾಗಳಿಗೆ ಹಾಗೂ ಮಾಫಿಯಾ ಗಳ ಜೊತೆ ಸಹಕರಿಸಿದ ಕೆಲವು ಅಧಿಕಾರಿ ಗಳಿಗೂ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.

ವರದಿ ಬಸವರಾಜ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ