ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರಚುಟುಕು ಕಾವ್ಯಗಳ ಸಂಕಲನ ಅಕ್ಷರ ಭಾಗ್ಯ-2 ಹಸ್ತಪ್ರತಿ ಲೋಕಾರ್ಪಣೆ

ಗದಗ:ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ (KABR)ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಾವೇರಿಯ ಗುರುಭವನದ ಹತ್ತಿರ ಅಂಗನವಾಡಿ ಎದುರಿಗೆ ನಡೆದ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಪುಸ್ತಕದ ಬಿಡುಗಡೆ ಹಾಗೂ ಕೋಟಿ ಕನಸುಗಳ ಅರಮನೆ ನಾಮಫಲಕದ ಅನಾವರಣ ಮತ್ತು ಹೈ ವೈಬ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಲೋಗೋ ಉದ್ಘಾಟನೆ ಸಮಾರಂಭದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಚುಟುಕು ಕವಯತ್ರಿ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರ ಕನ್ನಡ ವರ್ಣಾಕ್ಷರಗಳಲ್ಲಿ ರಚಿತವಾದ ಅಕ್ಷರ ಭಾಗ್ಯ-2 ಹಸ್ತಪ್ರತಿ ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಾದಾಮಿ-ಬೇಲೂರಿನ ಶ್ರೀ ಗುರು ಬಸವೇಶ್ವರ ಮಠದ ಶ್ರೀ ಮ.ನಿ.ಪ್ರ.ಡಾ.ಮಹಾಂತ ಸ್ವಾಮಿಗಳು, ಹಾವೇರಿಯ ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸತೀಶ ಕುಲಕರ್ಣಿ,ಹಾವೇರಿಯ ಹಿರಿಯ ಸಾಹಿತಿ ಶ್ರೀ ಸಿ.ಎಸ್.ಮರಳಿ ಹಳ್ಳಿ,
ಶ್ರೀ ಶ್ರೀನಿವಾಸ ರಾಮರಾವ್ ಹಂಚಾಟೆ,ಶ್ರೀಮತಿ ಶಾಂತಾಬಾಯಿ ಶ್ರೀನಿವಾಸ ಹಂಚಾಟೆ,
KABR ಸಂಸ್ಥೆಯ ಸಂಸ್ಥಾಪಕರಾದ ಡಾ.ಅಂಬಿಕಾ ಹಂಚಾಟೆ,ಬೀದರಿನ ಹಿರಿಯ ಕಲಾವಿದ ಶ್ರೀ ಶಂಭುಲಿಂಗ ವಾಲ್ದೊಡ್ಡಿ,ಕನ್ನಡಪರ ಹೋರಾಟಗಾರ ಶ್ರೀ ರಮೇಶ ಬಿರಾದರ,ಶ್ರೀ ಲಕ್ಷ್ಮಣ ಚೌದ್ರಿ ಗೋಕಾಕ,ಶ್ರೀಮತಿ ಡಾ.ಶಾಂತಾಬಾಯಿ ಕರಡಿಗುಡ್ಡ,ಶ್ರೀ ಮಂಜುನಾಥ ಸಣ್ಣಿರಿಂಗಣ್ಣವರ,ಶ್ರೀ ಶಂಭುಲಿಂಗಯ್ಯ ಗಂಟೆಪ್ಪಗೌಡರ,ಶ್ರೀ ಜಿ ಎಮ್ ಓಂಕಾರನ್ನವರ,ಶ್ರೀ ಮಾರುತಿ ಮೆಡ್ಲೀರಿ ಸೇರಿದಂತೆ ಕಲಾವಿದರು,ಕವಿಗಳು ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ