ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಂಬಿಕೆ..ನಂಬಿಕೆ

ನಂಬಿಕೆಯೇ ಜೀವನದ ಉಸಿರು,
ನಂಬಿಕೆ ಇಂದಲೇ ಜೀವನ ಹಸಿರು,
ಸೂರ್ಯ ಮುಳುಗಿ ಕತ್ಹಲಾದಾಗ
ಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,
ಮತ್ತೆ ಬೆಳಗಾಗುವ ,
ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,
ನಂಬಿಕೆಯೆಂಬ ಗಡಿಯಾರದ ಹಿಂದೆ
ಸುತ್ತುತ್ತಿದೆ ಮಾನವ ಸಮಾಜದ ಮನಸ್ಸು..

ಮಗು ಬೆಳೆದು ಬದುಕು ನೀಡುವುದೆಂಬ ನಂಬಿಕೆ ತಂದ ತಾಯಿಗೆ,
ಏನೇ ಬರಲಿ ತಂದೆ-ತಾಯಿ
ತನಗೆ ಕಣ್ಗಾವಲಾಗಿ
ಬದುಕು ನೀಡುವರೆಂಬ
ನಂಬಿಕೆ ಮುಗ್ಧ ಮಗುವಿಗೆ
ನಂಬಿಕೆಯ ಮೇಲೆ
ತಿರುಗುತ್ತಿದೆ ಈ ಜಗವೆಲ್ಲಾ..

ದೇವರು ಪುನರ್ಜನ್ಮ ನೀಡುವನೆಂಬ ನಂಬಿಕೆ
ಬದುಕಿನ ಕೊನೆ ಕ್ಷಣವ ಎಣಿಸುತ್ತಿರುವ ರೋಗಿಗೆ,
ತನ್ನ ವೈದ್ಯಕೀಯ ಜ್ನಾನದಿಂದ
ರೋಗಿಗೆ ಜೀವ ಕೊಡುವ ನಂಬಿಕೆ ವೈದ್ಯ ಮಹಾಶಯನಿಗೆ..
ನಂಬಿಕೆಯ ಮೇಲೆ ನಡೆದಿದೆ ಬದುಕು..

ಬಿರುಬಿಸಿಲು ಕಳೆದು
ಮಳೆಯ ಸಿಂಚನ ನಡೆದು,
ತನ್ನ ಭೂಮಿ ಫಲವತ್ತತೆ ಪಡೆದು,
ತನ್ನ ಕುಟುಂಬದ ಭವಿಷ್ಯ ಬದಲಾಯಿಸಲಿದೆ ಎಂಬುದು
ನೇಗಿಲ ಯೋಗಿಯ ನಂಬಿಕೆ,
ಅಶಾಂತಿ,ಸ್ವಾರ್ಥ, ಬ್ರಷ್ಟತೆ ತೊಲಗಿ
ಸುಂದರ ದೇಶ ಕಟ್ಟುವುದು
ಯುವ ದೇಶಪ್ರೇಮಿಗಳ
ಹೃದಯದಾಳದ ನಂಬಿಕೆ..

ಎಲ್ಲ ನಂಬಿಕೆಗಳೂ
ಫಲ ನೀಡಲಿ,
ಸುಂದರ,ಸುಮಧುರ
ಸಮಾಜ ನಿರ್ಮಾಣ ಆಗಲಿ
ಎಂಬುದೇ ಎಲ್ಲರ ಅನುಕ್ಷಣದ ಹಾರೈಕೆ..

-ಡಾ. ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು,ಕೆ.ಆರ್.ನಗರ
ಮೈಸೂರು ಜಿಲ್ಲೆ
ಮೊಬೈಲ್-6363172368

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ