ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯೋಗ ಸಪ್ತಾಹ ಶಿಬಿರ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಜ್ಞಾನ ಮಿತ್ರ ಟ್ಯೂಷನ್ ಕ್ಲಾಸಸ್ ವತಿಯಿಂದ ಏಳು ದಿನದ ಯೋಗ ಸಪ್ತಾಹ ಶಿಬಿರ
ಹಮ್ಮಿಕೊಳ್ಳಲಾಗಿತ್ತು.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಮತ್ತು ಭಗತ್ ಸಿಂಗ್ ಯೋಗ ಕೇಂದ್ರ ಸಿದ್ದಾಪೂರ ಇವರ ನೇತೃತ್ವದಲ್ಲಿ ವೃಕ್ಷ ರಕ್ಷ ಸೇವಾ ಬಳಗ ಡಣಾಪೂರ ಇವರ ಸಹಯೋಗದಲ್ಲಿ 7 ದಿನದ ಯೋಗ ಸಪ್ತಾಹ ಶಿಬಿರ ಹಮ್ಮಿಕೊಂಡು ಏಳುದಿನಲ್ಲಿ ಶಾಲೆಯ ಮಕ್ಕಳಿಗೆ ಹಾಗೂ ಗ್ರಾಮದವರಿಗೆ ಯೋಗ ಆಸನಗಳು ,ಬಾಡಿ ಎಕ್ಸೈಸುಗಳು ,ಪ್ರಾಣಾಯಾಮ , ಮುದ್ರೆಗಳ ಪ್ರಾಣಾಯಾಮ ಯೋಗದ ಪರಿಚಯ ಯೋಗದಿಂದ ಅನುಕೂಲಗಳ ಬಗ್ಗೆ ಸವಿಸ್ಥಾರವಾಗಿ ಏಳು ದಿನದ ಶಿಬಿರದಲ್ಲಿ ತಿಳಿಸಲಾಯಿತು.

ಸೋಮವಾರಕ್ಕೆ ಏಳು ದಿನದ ಕಾರ್ಯಕ್ರಮವನ್ನು ಅಮ್ಮಿಕೊಂಡು ಭಾಗಿಯಾದ ಮಕ್ಕಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ,ಮರಿಸ್ವಾಮಿ ಕೆ ಭಗತ್ ಸಿಂಗ್ ಯೋಗ ಕೇಂದ್ರ ಸಿದ್ದಾಪೂರ ಅವರು ವಹಿಸಿಕೊಂಡು ಕೊತ್ತಲ ಬಸವೇಶ್ವರ ಸೇಡಂ ಅವರು ಭಾರತಿಯ ಸಂಸ್ಕೃತ ಉತ್ಸವದ ಕಾರ್ಯಕ್ರಮದ ಬಗ್ಗೆ ಬಗ್ಗೆ ಮಕ್ಕಳಿಗೆ ತಿಳಿಸಿದರು ಹಾಗೂ ಯೋಗದ ಮಹತ್ವ ಮತ್ತು ಜೀವನದಲ್ಲಿ ನಿತ್ಯ ಅಳವಡಿಸಿಕೊಳ್ಳುವುದರಿಂದ ನಮಗೆ ರೋಗಗಳು ದೂರವಾಗುತ್ತವೆ ,ದೇಹ ಮತ್ತು ಮನಸನ್ನು ಕೇಂದ್ರೀಕೃತ ಮಾಡಿಕೊಳ್ಳಲು ಸಹಕಾರಿಯಾಗಲಿದೆ ,ಧ್ಯಾನ ಇನ್ನಿತರ ಸರಳ ಆಸನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ ಶ್ರೀಲಂಕಾದಲ್ಲಿ ಭಾಗಿಯಾಗಿ ಶ್ರೀಲಂಕಾದಲ್ಲಿ ನಡೆದ ಯೋಗ ಸಮ್ಮೇಳನದಲ್ಲಿ ಯೋಗ ಪ್ರದರ್ಶನ ಮಾಡಿದ ಮರಿಸ್ವಾಮಿ ಕೆ ಅವರಿಗೆ ವೃಕ್ಷ ರಕ್ಷ ಯೋಗ ಬಳಗದಿಂದ ಗೌರವ ಪೂರ್ವಕ ಸನ್ಮಾನ ಮಾಡಲಾಯಿತು.

ಈ ವೇಳೆಯಲ್ಲಿ ಮುಖ್ಯ ಅಥಿತಿಗಳಾದ ಯೋಗ ಸಾಧಕರಾದ ಮರಿಸ್ವಾಮಿ. ಕೆ ಸಿದ್ದಾಪೂರ ಹಾಗೂ ನಿತ್ಯ ಯೋಗ ನಡೆಸಿಕೊಟ್ಟ ಬಸವರಾಜ ,ರಾಘವೇಂದ್ರ ಹನುಮೇಶ ಭಾವಿಕಟ್ಟಿ, ಯೋಗ ಶಿಕ್ಷಕರು ಹಾಗೂ ಮುತ್ತುರಾಜ ,ಬಸವರಾಜ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ