ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಳ್ಳೇಗಾಲ : ಕಾಟಾಚಾರಕ್ಕೆ ನಡೆದ ಜನ ಸಂಪರ್ಕ ಸಭೆ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಉಪವಿಭಾಗ ಕಛೇರಿ ಆವರಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್(ಡಿ), ಚಾವಿಸನಿನಿ. ಕೊಳ್ಳೇಗಾಲ ಉಪ ವಿಭಾಗ, ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಆಯೋಜನೆ ಮಾಡಲಾಗಿತ್ತು.
ಜನಸಂಪರ್ಕ ಸಭೆಯನ್ನು ಸಮಯ ಮಧ್ಯಾಹ್ನ 3:00 ಗಂಟೆಗೆ ಆಯೋಜನೆ ಮಾಡಲಾಗಿತ್ತು ಇದರಲ್ಲಿ ಜನ ಕಡಿಮೆ ಸಂಖ್ಯೆಯಲ್ಲಿ ಸೇರಿದ್ದರು ಹಾಗೂ ಬ್ಯಾನರ್ ಕೂಡ ಹಾಕಿರಲಿಲ್ಲ ಹಾಗೆಯೇ ಸಹಾಯಕ ಅಭಿಯಂತರಾದ ರಾಜು ಸರಿಯಾದ ರೀತಿಯಲ್ಲಿ ಜನರಿಗೆ ಸಹಕರಿಸಲಿಲ್ಲ ಕೋಪದ ಭರದಲ್ಲಿ ಮಾತಾಡಿದರು ಹಾಗೆಯೇ ಈ ಚವಿಸನಿನಿ ಕೊಳ್ಳೇಗಾಲ ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳನ್ನು ಸಭೆಗೆ ಹಾಜರಾಗಿ ಬಗೆಹರಿಸಿಕೊಳ್ಳಬೇಕೆಂದು ಈ ಮೂಲಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ತಿಳಿಸಿದರು ಆದರೆ ಸಹಾಯಕ ಅಭಿಯಂತರ ಚಾವಿಸನಿನಿ. ಕೊಳ್ಳೇಗಾಲ ಉಪ ವಿಭಾಗ ರಾಜು ಇವರು ಜನರ ಜೊತೆ ಕ್ರೂರ ಸ್ವಭಾವದಿಂದ ವರ್ತಿಸುತ್ತಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಇದೆ ವೇಳೆ ಕಾರ್ಯಪಾಲಕ ಅಭಿಯಂತರ ಆದ ತಬಸ್ಸುಂ ಅಪ್ಸ ಬಾನು ಇವ್ರು ಸಹ ನೆರೆದಿದ್ದ ಜನರ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಆಲಿಸದೆ ನಿಖರ ಮಾಹಿತಿ ಕೊಡದೆ ಇದ್ದಾಗ ಸಭೆಯು ಅಲ್ಪ ಸಮಯ ಗೊಂದಲದ ಗೂಡಾಗಿತ್ತು ನಂತರ ಆತುರ ಆತುರದಲ್ಲಿ ಸಹಾಯಕ ಅಭಿಯಂತರ ರಾಜು ಸಭೆಯನ್ನು ಮುಗಿಸಿದರು, ಇದರಿಂದ ಸಾರ್ವಜನಿಕರಿಗೆ ಬೇಸರ ಆಯ್ತು ಮುಂದಿನ ದಿನದಲ್ಲಿಯಾದರೂ ಅಚ್ಚುಕಟ್ಟಾಗಿ ಇಂಥ ಸಭೆಗಳನ್ನು ಮಾಡಬೇಕೆಂದು ಜನರು ಮಾತಾಡಿಕೊಂಡರು.
ಈ ಸಭೆಯಿಂದ ಜನರ ಸಮಯ ವ್ಯರ್ಥ ಆಯ್ತು ಇದರಿಂದ ಜನರಿಗೆ ಯಾವುದೇ ಉಪಯೋಗ ಆಗಿಲ್ಲ
ಎಂದು ಸಭೆಯಲ್ಲಿ ಸೇರಿದ್ದ ನಾಗರಿಕರು ಅಭಿಪ್ರಾಯಪಟ್ಟರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ