ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಂಗಗಳ ಕಾಟದಿಂದ ಬೇಸತ್ತ ರೈತರು ಪತ್ರದ ಮುಖಾಂತರ ಅರಣ್ಯಾಧಿಕಾರಿಗಳಿಗೆ ಮನವಿ

ಬೀದರ/ ಬಸವಕಲ್ಯಾಣ: ಇಂದು ದಿ. 05/03/2025 ಬುಧವಾರದಂದು ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗದುರಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಂಗಗಳು ಸರ್ವನಾಶ ಮಾಡುತ್ತಿವೆ, ಸದ್ಯ ಗ್ರಾಮದಲ್ಲಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ತಮ್ಮ ಉಪ ಜೀವನಕ್ಕಾಗಿ ಕೆಲವರು ಗೋಧಿ, ಖಪಲಿ, ಜೋಳ, ಸೇಂಗಾ, ಕಲ್ಲಂಗಡಿ, ತರಕಾರಿ ಹೀಗೆ ಇತರೆ ಬೆಳೆಗಳನ್ನು ಬೆಳೆದಿರುತ್ತಾರೆ. ಆದರೆ ರೈತರು ಬೆಳೆದ ಬೆಳೆ ಅವರ ಅವರುಗಳ ಕೈಗೆ ಸಿಗದಂತಾಗಿದೆ, ಏಕೆಂದರೆ ಸುಮಾರು 500 ರಿಂದ 1000 ಸಾವಿರ ಮಂಗಗಳು ತಲಾ 40 ರಿಂದ 50ರ ಗುಂಪುಗಳನ್ನಾಗಿ ಮಾಡಿಕೊಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಸರ್ವನಾಶ ಮಾಡುತ್ತಿರುವುದನ್ನು ಕಂಡು ರೈತರು ಬೇಸತ್ತು ಇಂದು ಬಸವಕಲ್ಯಾಣ ನಗರದ ಉಪ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಭೇಟಿ ಮಾಡಿ ಪತ್ರದ ಮುಖಾಂತರ ತಮ್ಮ ಅಳಲು ತೋಡಿಕೊಂಡರು. ಇದೇ ಸಂಧರ್ಭದಲ್ಲಿ ಗ್ರಾಮದ ರೈತರುಗಳಾದ ಶ್ರೀ ಶಿವಾನಂದ ಬಿರಾದಾರ, ಶ್ರೀ ರವಿಂದ್ರ ಮೂಲಗೆ, ಶ್ರೀ ಶರಣಪ್ಪಾ ಮಹಾಗಾಂವ, ಶ್ರೀ ಯಶ್ವಂತ ಮೈಸೆ, ಶ್ರೀ ಸುದೇವ ಮಹಾಗಾಂವ, ಶ್ರೀ ಜೀತೇಂದ್ರ ಮಂದಿರಕರ, ಶ್ರೀ ಶಂಭುಲಿಂಗ ರಾಜೋಳೆ, ಶ್ರೀ ಪರಮೇಶ್ವರ ಬಿರಾದಾರ, ಶ್ರೀ ಸಂಜೀವಕುಮಾರ ಬಿರಾದಾರ, ಶ್ರೀ ಮಹೇಶ ಬಿರಾದಾರ, ಎಮ್.ಡಿ. ರಫೀಕ ಮುಲ್ಲಾ, ರಸೀದಮಿಯ್ಯಾ ಮುಲ್ಲಾ ಹಾಗೂ ಇತರರು ಇದ್ದರು.

ವರದಿ ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ