ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರೈತರ ವಿವಿಧ ಬೇಡಿಕೆಗಳಿಗಾಗಿ ಕೈಬಿಡದ ಬೃಹತ್ ಪ್ರತಿಭಟನೆ

ಕಲಬುರಗಿ: ಮಾರ್ಚ್ 5 ರಂದು ಜಿಲ್ಲೆಯ ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಸಾವಿರಾರು ರೈತರು ಎತ್ತಿನ ಬಂಡೆಗಳು ಮತ್ತು ಟ್ರ್ಯಾಕ್ಟರ್ ಗಳ ಮುಖಾಂತರ ಮಠಾಧೀಶರು, ಸಂಘ – ಸಂಸ್ಥೆಗಳು, ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮಾಜಿ ಸೈನಿಕರು ಹಾಗೂ ಹಲವಾರು ರೈತ ಮುಖಂಡರು ಸ್ವಯಂ ಪ್ರೇರಿತರಾಗಿ ಜಿಲ್ಲಾ ರೈತ ಹೋರಾಟ ಸಮಿತಿಗೆ ಬೆಂಬಲ ಕೊಟ್ಟು ಬೃಹತ್ ಪ್ರತಿಭಟನೆಯ ಮುಖೇನ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ರೈತರ ವಿವಿಧ ಬೇಡಿಕೆಗಳಾದ 2025 ರಲ್ಲಿ ಹಾನಿಯಾದ ತೊಗರಿ ಬೆಳೆಗಳಿಗೆ ಪರಿಹಾರ, ಸುಮಾರು ಹತ್ತು ಸಾವಿರ ಬೆಂಬಲ ಬೆಲೆ ಘೋಷಣೆ ಹಾಗೂ ಇತರೆ ಮುಖ್ಯವಾದ ಬೇಡಿಕೆಗಳನ್ನು ಈಡೇರಿಸುವುದರ ಸಲುವಾಗಿ ನಿರಂತರವಾಗಿ ಎರಡು ದಿನಗಳ ಕಾಲ ಹೋರಾಟ ಮಾಡುತ್ತಿದ್ದರು ಕ್ಯಾರೇ ಎನ್ನದ ದಪ್ಪ ಚರ್ಮದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ ಎಂದು ರೈತ ಮುಖಂಡ ರೇವಣಸಿದ್ದಪ್ಪ ಸಂಕಾಲಿಯವರು ಹೇಳಿದರು. ಈ ಹೋರಾಟ ಮಾಡುವುದು ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡಾ ಯಾವುದೇ ರೀತಿಯಾಗಿ ಜಿಲ್ಲಾಧಿಕಾರಿಗಳಾಗಲಿ, ಉಸ್ತುವಾರಿ ಸಚಿವರಾಗಲಿ ಸ್ಪಂದಿಸದೆ ಇರುವುದರಿಂದ ರೈತ ಜಿಲ್ಲಾ ಹೋರಾಟ ಸಮಿತಿಯ ಪತ್ರಿಭಟನೆ ಮತ್ತು ಹೋರಾಟವು ಇನ್ನೂ ತೀವ್ರಗೊಳಿಸಿ ಬೆಂಗಳೂರಿನ ವಿಧಾಸೌಧ ಮುತ್ತಿಗೆ ಹಾಕುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿ ಪಾಟೀಲ್ ಆಕ್ರೋಶ ಹೊರ ಹಾಕಿದರು.
ನಿರಂತರವಾಗಿ ಎರಡು ದಿನಗಳ ಕಾಲ ಹೋರಾಟ ಮಾಡುತ್ತಿದ್ದರೂ ಸ್ಪಂದಿಸದ ಸರ್ಕಾರಕ್ಕೆ ನಾವು ನ್ಯಾಯ ಸಿಗುವುವರೆಗೆ ಹೋರಾಟ ಮಾಡುತ್ತೇವೆ ಯಾವುದೇ ರೀತಿಯಾಗಿ ಕೈ ಬಿಡುವ ಸಂಶಯವೇ ಇಲ್ಲವೆಂದು ರೈತ ನಾಯಕರಾದ ಅವಣ್ಣ ಮ್ಯಾಕೇರಿಯವರು ಹೇಳಿದರು.
ಈ ಒಂದು ಪ್ರತಿಭಟನೆಯಲ್ಲಿ ಮುಖ್ಯವಾಗಿ ರೈತ ಮುಖಂಡರಾದ ದಯಾನಂದ ಪಾಟೀಲ್, ಸುರೇಶ್ ಸಜ್ಜನ್ ,ಪ್ರಶಾಂತಗೌಡ ಮಾಲಿ ಪಾಟೀಲ್, ಶರಣಗೌಡ ಐಕೂರ್, ಸುರೇಶ್ ಪಾಟೀಲ್ ನೇದಲಗಿ, ಬಸವರಾಜ ಸಂಕಾಲಿ, ಶರಣಗೌಡ ಪಾಟೀಲ್ ಗುಡೂರ ಹಾಗೂ ಇತರರೆಲ್ಲಾ ರೈತ ಮುಖಂಡರು ಭಾಗವಹಿಸಿದರು‌.
ಹೋರಾಟದಲ್ಲಿ ಹಲವಾರು ರೈತರು ತಮ್ಮ- ತಮ್ಮ ಶಾಸಕರ ಹಾಗೂ ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ