ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಹಿಳಾ ದಿನಾಚರಣೆಯ ಶುಭಾಶಯಗಳು

ಮಾತೆಯಾಗಿ, ಮಡದಿಯಾಗಿ,
ಮಗಳಾಗಿ ನಿಷ್ಠೆಯಿಂದ ನಿಭಾಯಿಸುತ್ತಿರುವೆ,
ನಿನಗೆ ದಕ್ಕಿದ ಪದವಿಯನ್ನು ಎಲ್ಲವೂ ಶಿವಲೀಲೆ ಎಂದು

ಹೆಣ್ಣೆಂದರೆ ದೀನಳಾಗಿ, ದಯೆಯಿಂದ, ಧರ್ಮಕ್ಕಾಗಿ ಅನೀತಿಯನ್ನು ಆಳಿಸಿ,
ತನ್ನೆಲ್ಲಾ ಭಾವನೆಗಳ ಬುತ್ತಿಯನ್ನು ಎದೆಯೊಳಗಿಟ್ಟು, ತನ್ನನ್ನೇ ಅರ್ಪಿತವಾಗಿ,
ಸದ್ಗುಣಗಳ ಬಿತ್ತರಿಸುವ ಸಂಜನಾಳಂತೆ

ಹೆಣ್ಣೆಂದರೆ ಜೀವನವೆಂಬ ಕೊಳಲಿನೊಳಗೆ ಇಂಪಾಗಿ ಉದಯಿಸುವ
ಮನಮೋಹಕ ಶ್ರುತಿಯಂತೆ,
ಬಂದು ಬಳಗದ ಜೊತೆ ಪ್ರೇಮದಿಂದ ಪಯಣಿಸುವ ಮಹಾ ಸಾದ್ವಿಯಂತೆ.

ಹೆಣ್ಣೆಂದರೆ ಶರಾವತಿ ಹಿನ್ನೀರಿನ ದಡದ ತಟದಲ್ಲಿ ಅಬ್ಬರಿಸುವ
ಅಲೆಗಳ ಮಂಜುಳಗಾನ ಆಲಿಸುತ್ತಾ,
ಮಂದಸ್ಮಿತವಾಗಿ ಬಂದ ಭಕ್ತರನ್ನು ಸಲಹುವ ಸಿಗಂದೂರ ಚೌಡೇಶ್ವರಿಯಂತೆ.

ಹೆಣ್ಣೆಂದರೆ ತ್ಯಾಗ, ಪ್ರೀತಿ, ಕರುಣೆ, ವಿಶ್ವಾಸವನ್ನು ಬೆಳ್ಳಿಯ ಕೊಡದಲ್ಲಿಟ್ಟು,
ತನ್ನ ಆಸೆ-ಆಕಾಂಕ್ಷೆ ಬಿಟ್ಟು, ಬಂಗಾರದ ಪಂಜರದಲ್ಲಿ ಬಂದಿಯಾದ ಬಂಗಾರದ ಜಿಂಕೆಯಂತೆ.
ಪ್ರೀತಿಗೆ ಅರ್ಥವಿಲ್ಲದೆ, ಭಾವನೆಗಳ ಬೇಸಿಗೆಯಿಲ್ಲದೆ,
ಗಂಡ ಮಕ್ಕಳನ್ನು ತ್ಯಜಿಸುವ ನಾರಿಯರು ಸಾವಿರಕ್ಕೊಬ್ಬರು.

ಹೆಣ್ಣೆಂದರೆ ಬರುವ ಐಶ್ವರ್ಯ, ಸುಖ, ನೆಮ್ಮದಿಗಾಗಿ ಕಾಯುವ ಶಾಲಿನಿಯಂತೆ,
ಮಳೆಗಾಗಿ ಕಾಯುತ್ತಿರುವ ಸಂಪೂರ್ಣ ಇಳೆಯಂತೆ.
ಬದುಕಿನ ಬೇಕು-ಬೇಡಗಳ ಬೆನ್ನಟ್ಟಿ ನಗುವನ್ನು ಅರಸಿ ಹೊರಟ ಹರಿಣಿಯಂತೆ,
ಮಂತ್ರ, ತಂತ್ರ, ಕುತಂತ್ರಗಳ ಅತಂತ್ರ ತೊರೆದು, ಜಗವನ್ನೆಲ್ಲ ಹರಸುವ ಗಾಯತ್ರಿ ಮಂತ್ರದಂತೆ.

ಹೆಣ್ಣೆಂದರೆ ಮಂಡಿಯೂರಿ ಮಮತೆಯಿಂದ ಕೈ ಮುಗಿಯುವುದು ಗೊತ್ತು,
ಅವಳಲ್ಲಿದೆ ಆಕಾಶದವರೆಗೂ ತಲೆಯೆತ್ತಿ ಅರ್ಭಟಿಸುವ ಸಿಂಹಿಣಿಯ ಗತ್ತು.
ತಂದೆ, ತಾಯಿ, ಗಂಡ, ಮಕ್ಕಳ ಜವಾಬ್ದಾರಿ ಹೊತ್ತು ಸಾಗುವ ಸಂಸಾರದ ಸಾರಥಿ,
ಭವ್ಯ ಭಾರತಾಂಬೆಯ ಮಡಿಲಲ್ಲಿ, ಕರುನಾಡ ಮಣ್ಣಲ್ಲಿ ಶತಶತಮಾನಗಳಿಂದಲೂ
ಶಿಲ್ಪಕಲೆಗಳ ಕಲರವ!
ಈ ಮಣ್ಣಿನಲ್ಲಿ ಹುಟ್ಟಿದ ಹೆಣ್ಣಿಗೆ ಸಿಗುವುದು ಅಪಾರ ಗೌರವ!

ಪೂರ್ಣಿಮೆಯ ಬೆಳಕಿನಂತೆ ಲೋಕವನ್ನೆಲ್ಲಾ ತಾಳ್ಮೆ, ತ್ಯಾಗ, ಪ್ರೀತಿಯಿಂದ ಬೆಳಗಿಸುವೆ,
ಶೋಭಾಯಮಾನವಾಗಿ ನೀ ಜಗದ ಅರ್ಥವನ್ನೇ ರೂಪಿಸುವೆ ದೇವತೆಯಾಗಿ !

  • ವಿ.ಶ್ರೀನಿವಾಸ ವಾಣಿಗರಹಳ್ಳಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ