ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅದ್ದೂರಿಯಾಗಿ ಬೀಳ್ಕೊಡುಗೆ ಕೊಟ್ಟ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ: ಹಣಮಂತ್ರಾಯಗೌಡ ಪಾಟೀಲ್

ಕಲಬುರಗಿ /ಜೇವರ್ಗಿ : ತಾಲೂಕಿನ ಪ್ರತಿಷ್ಠಿತ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯು 2024 – 25 ನೇ ಸಾಲಿನ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ಕಾರ್ಯಕ್ರಮವು ಬಹಳ ಸಂಕ್ಷಿಪ್ತ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಖಜಾಂಚಿ ಮತ್ತು ಸದಸ್ಯರಾದ ಶ್ರೀ ಬಸಣ್ಣಗೌಡ ಪಾಟೀಲ್ ದಳಪತಿ ಹಾಗೂ ಶರಣಗೌಡ ಪಾಟೀಲ್ ರವರು ಜ್ಯೋತಿ ಬೆಳಗಿಸುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಘನ ಅಧ್ಯಕ್ಷ ಸ್ಥಾನ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹಣಮಂತ್ರಾಯಗೌಡ ಪಾಟೀಲ್ ರವರು ಸಂಸ್ಥೆಯು ನಡೆದ ಬಂದ ದಾರಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಇನ್ನೂ ಹಲವಾರು ಮೌಲ್ಯಯುಕ್ತವಾದ ನುಡಿಗಳನ್ನಾಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಶಾಲೆಯ ವಿದ್ಯಾರ್ಥಿ/ನಿಯರು ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಹಾಡು ಹಾಗೂ ಅನಿಸಿಕೆಗಳನ್ನು ಹೇಳುತ್ತಾ ಹಲವಾರು ವಿದ್ಯಾರ್ಥಿಗಳು ಸಂಸ್ಥೆ ಮತ್ತು ಶಿಕ್ಷಕರನ್ನು ಹೇಗೆ ಬಿಟ್ಟು ಹೋಗಬೇಕು ಎಂದು ಗಳ-ಗಳ ಕಣ್ಣೀರಿಟ್ಟರು.ನಂತರ ಕಾರ್ಯಕ್ರಮದ ಎರಡನೇ ಘಟ್ಟವಾದ ಜ್ಯೋತಿ ಬೆಳಗಿಸುವದರ ಮೂಲಕ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಪಾಟೀಲ್ ರವರು ಜ್ಯೋತಿ ಬೆಳಗಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಗಳ ಕುರಿತು ಷಟ್ವರ್ಗಗಳಾದ ತಾಯಿ, ತಂದೆ, ಗುರು, ಶ್ರದ್ದೆ, ಪ್ರಾಮಾಣಿಕತೆ, ಗೌರವ ಈ ಆರು ರತ್ನಗಳ ಬಗ್ಗೆ ಸವಿವರವಾಗಿ ಉದಾಹರಣೆಗಳೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತದನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸಂಗಮೇಶ ಸಂಕಾಲಿಯವರು ದೇಶ ಕಾಯುವ ಯೋಧರು ಮತ್ತು ಜಗತ್ತಿಗೆ ಅನ್ನ ಹಾಕುವ ರೈತರಿಂದ ಕೂಡಿದ ವೇದಿಕೆಯನ್ನು ನೋಡಿ ಅತೀವ ಸಂತೋಷವಾಯಿತು ಎಂದು ನುಡಿದರು. ನಂತರ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಹಾಲಕ್ಷ್ಮಿ ಹೆಚ್ ಪಾಟೀಲ್ ರವರು ವಿದ್ಯಾರ್ಥಿಗಳ ಬದುಕಿನ ಏಳಿಗೆಗಾಗಿ ನಾವು ಹಲವಾರು ಬಾರಿ ತಿದ್ದಿ, ಬುದ್ದಿ ಮತ್ತು ಬೈದು ಹೇಳಿದ್ದು ಯಾರಿಗಾದರೂ ಮನಸ್ಸಿಗೆ ನೋವಾದರೆ ಕ್ಷಮೆ ಇರಲಿ ಎಂದು ಹೇಳಿದರು ಮತ್ತು ಕಾರ್ಯಕ್ರಮದುದ್ದಕ್ಕೂ ಶ್ರೀಮತಿ ಸಿದ್ದಮ್ಮ ಉಳ್ಳೆ ಸಹ ಶಿಕ್ಷಕಿಯವರು ಸ್ವಾಗತ ಕೋರಿ ನಿರೂಪಿಸಿ ,ಕಾರ್ಯಕ್ರಮಕ್ಕೆ ವಂದನಾರ್ಪಣೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಇನ್ನೋರ್ವ ಸದಸ್ಯರಾದ ಕುಮಾರ ಉಮೇಶ ಪಾಟೀಲ್ ,ಶಿಕ್ಷಕಯರಾದ ಶ್ರೀಮತಿ ಭುವನೇಶ್ವರಿ, ದೀಪಾ ಪಾಟೀಲ್ ಭಾಗ್ಯಶ್ರೀ,ಶಿಕ್ಷಕರಾದ ದೊಡ್ಡಪ್ಪ ಹರವಾಳ, ವಿವೇಕಾನಂದ ಹಾಗೂ ಇನ್ನಿತರ ಹಲವಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಪಾಲಕ- ಪೋಷಕ ಬಂಧುಗಳು ಪಾಲ್ಗೊಂಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ