ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಕ್ಷೇತ್ರದ ಸಾಧಕರಿಗೆ ಅಕ್ಕ ಪ್ರಶಸ್ತಿ ಪ್ರದಾನ

ಬಳ್ಳಾರಿ / ಕಂಪ್ಲಿ : ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮುನ್ನುಗ್ಗುವ ಮೂಲಕ ಯಶಸ್ಸು ಸಾಧಿಸಬೇಕಿದೆ ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ಅಕ್ಕ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಸಾಕ್ಷರರಾಗುವ ಮೂಲಕ ಸರ್ವಾಂಗೀಣ ಪ್ರಗತಿ ಸಾಧಿಸಬೇಕಿದೆ. ಮಹಿಳಾ ಸ್ವಾಭಿಮಾನಿ ಮತ್ತು ಆತ್ಮಬಲದ ಸಂಕೇತವಾಗಿದೆ. ಅವರ ಜೀವನದ ಯಶೋಗಾಥೆಯಾಗಿದೆ ಎಂದರು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ, ಪೋಷಣೆ ಮತ್ತು ಅವಕಾಶ ಕಲ್ಪಿಸಲು ಪಾಲಕರು ಮುಂದಾಗಬೇಕು. ಎಲ್ಲರ ಸಹಕಾರದಿಂದಾಗಿ ಕಾರ್ಯಕ್ರಮ ಯಶಸ್ವಿಗೊಂಡಿದೆ ಎಂದರು.
ಸಮಾಜ ಸೇವೆಗಾಗಿ ಎಚ್.ಸಂಗೀತಾ, ವಾಲಿ ಶಾರದಾ, ಜೆ.ಎಂ.ಶೋಭಾ, ಸಿ.ಕೆ.ಶೋಭಾ, ಬಿ.ಸುನಿತಾ, ಎಂ.ವಸಂತ, ಎಂ.ಜಯಶ್ರೀ, ಎಂ.ಶಾರದಾ, ಬಿ.ಎಂ.ಪುಷ್ಪಾ, ಎಸ್.ವಿ.ಜಯಲಕ್ಷ್ಮೀ, ಟಿ.ಎಂ.ವಿಜಯಲಕ್ಷ್ಮೀ, ರತ್ನಮ್ಮ, ಸಚ್ಚೇದ ಸುಶೀಲ ಇವರಿಗೆ ಅಕ್ಕ ಪ್ರಶಸ್ತಿ ನೀಡುವ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು ಹಾಗೂ ದಾನಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿವಶರಣೆ ಅತ್ತಿವೇರಿ ಬಸವಧಾಮ ಮಾತಾಜಿ, ಪ್ರಮುಖರಾದ ವಾಲಿ ಕೊಟ್ರಪ್ಪ, ಎಸ್.ಎಸ್. ಎಂ.ಚನ್ನಬಸವರಾಜ, ಎಸ್.ಎಂ.ನಾಗರಾಜ, ಎಚ್.ಜಗದೀಶ, ಮಂಡಳಿ ಉಪಾಧ್ಯಕ್ಷೆ ಭತ್ತದ ಸಂಧ್ಯಾ, ಸಹ ಕಾರ್ಯದರ್ಶಿ ಕೆ.ಎಂ.ಸೌಮ್ಯಾ, ಖಜಾಂಚಿ ತಾಂಡೂರು ಸುಜಾತಾ, ನಿರ್ದೇಶಕಿಯರಾದ ವಾಲಿ ಶಕುಂತಲಾ, ಕೆ.ರಾಜೇಶ್ವರಿ, ಕೆ.ಚನ್ನಮ್ಮ, ಕೆ.ನಾಗರತ್ನ, ಡಾ.ಶಾರದಾ ಹಿರೇಮಠ, ಯುಗಾದಿ ವಿನುತಾ, ಮುಕ್ಕುಂದಿ ಮಮತಾ, ಕೆ.ರತ್ನ, ಸುಭದ್ರಾ ದೇವಿ, ವಿಜಯಲಕ್ಷಿ ವೀರಶೈವ ಸಮಾಜದ ನಾನಾ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ