ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

50 ಕೋಟಿ ರೂ. ನಾಯಿಯ ಖರೀದಿ ಮಾಡಿದ್ದೇನೆ ಎಂದಿದ್ದವನ ಮನೆ ಮೇಲೆ ಇ.ಡಿ ರೈಡ್! ನಿಜ ಗೊತ್ತಾದ್ರೆ ನೀವೂ ನಗ್ತೀರಾ!

ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾದ ಶ್ವಾನವನ್ನು ಪ್ರದರ್ಶಿಸುತ್ತಾ… ಈ ಶ್ವಾನಕ್ಕೆ 50 ಕೋಟಿ ರೂ. ಕೊಟ್ಟು ತಗೊಂಡಿದ್ದೀನಿ ಎಂದು ಪೋಸು ಕೊಡುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ ಗೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ (ಇ.ಡಿ.) ಶಾಕ್ ನೀಡಿದೆ.
ಶ್ವಾನಪ್ರೇಮಿ ಸತೀಶ್ ಅವರ ಮನೆಗೆ ತೆರಳಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವಾರು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಬರೀ ಬೊಗಳೆ ಎಂಬುದು ತಿಳಿದುಬಂದಿದೆ. ಆದರೂ, ಅನುಮಾನಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಅಸಲಿ ವಿಚಾರ ಇನ್ನೂ ಮಜಾ!

ತನಿಖೆಯ ವೇಳೆ ಮತ್ತೊಂದು ವಿಚಾರವೂ ಬಯಲಿಗೆ ಬಂದಿದೆ. ಈತ ಶ್ವಾನಪ್ರಿಯನಷ್ಟೇ. ಆದರೆ, ಇಂಥ ಯಾವುದೇ ಅಪರೂಪದ ತಳಿಗಳನ್ನು ಸಾಕಿಲ್ಲ. ಈತ ಯಾರಾದರೂ ಇಂಥ ಅಪರೂಪದ ಶ್ವಾನಗಳನ್ನು ಸಾಕುವವರಿಂದ ನಾಯಿಗಳನ್ನು ಬಾಡಿಗೆಗೆ ಪಡೆದು ತಂದು ಅವುಗಳ ಜೊತೆಗೆ ರೀಲ್ಸ್ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ. ಅವು ವೈರಲ್ ಆಗುತ್ತಿದ್ದವು. ಇದನ್ನೇ ಹವ್ಯಾಸವನ್ನಾಗಿಸಿಕೊಂಡಿದ್ದ ಸತೀಶ್ ಗೆ ನಾಯಿಗಳನ್ನು ಬಾಡಿಗೆಗೆ ತಂದು ಶೂಟ್ ಮಾಡುವುದು ಶೋಕಿಯೂ ಆಗಿ ಬೆಳೆದಿತ್ತು ಎಂಬ ವಿಚಾರ ತನಿಖೆಯ ವೇಳೆ ಬಯಲಾಗಿದೆ.
ಈಗ ಇ.ಡಿ. ಕೈಯಲ್ಲಿ ಸಿಗಾಕಿಕೊಂಡಿದ್ದಾನೆ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಏನೋ ಮಾಡಲು ಹೋಗಿ ಏನೋ ಆಯಿತಲ್ಲ ಎನ್ನುವ ಹಾಗಿದೆ… ಈತನ ಪಾಡು!

ವರದಿ : ಜಿಲಾನಸಾಬ್ ಬಡಿಗೇರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ