ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರೇಮಕತೆ

ಬಹುದಿನಗಳ ಹಿಂದೆ
ಕತೆಯೊಂದ ಕೇಳಿದ ನೆನಪು..
ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು…

ಮನದಲಿ ಆತಂಕ
ಬರಿಯ ಗೊಂದಲ ಗೋಜಲು…
ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ…

ಇಲ್ಲಿಂದ ಬಹುದೂರ..
ನೋಟಕೂ ನಿಲುಕದ ದೂರದಿ..
ಎರಡು ಮುದ್ದಾದ ಜೀವಗಳು ಒಲವಿನಲಿ….

ಒಬ್ಬರನ್ನೊಬ್ಬರು ಕಾಣದೆ
ಭೇಟಿಯಾಗದೆ ಕಂಡುಂಡ ಪ್ರೇಮ ಕಥೆ..
ಒಲವಿನ ಲೋಕದಲಿ ಅಜರಾಮರವಾಗಿರುವ ನೈಜ ಕಥೆ….

ಇಬ್ಬರೂ ಪ್ರೇಮಿಗಳೇ
ಜೊತೆಗೆ ಬರೆಹದ ಹುಚ್ಚು ಒಂದಿನಿತು..
ಅದರ ಮತ್ತೆ ಪ್ರೇಮವೆಂಬ ಬಂಧವನು ಬೃಂದಾವನವಾಗಿಸಿತು…

ಇಬ್ಬರದೂ ಒಂದೇ ಲೋಕ
ಲೋಕದ ಕಣ್ಣಿನಲಿ ಬೇರೆ ಬೇರೆ
ಲೋಕಗಳ ಮಾಲೀಕರು ನಾವಿಕರಾಗಿ ಕಾಣಿಸಿಕೊಳ್ಳುವರು..

ಯಾರೊಬ್ಬರಿಗೂ ಹೇಳದೆ
ಯಾರೊಬ್ಬರನ್ನೂ ನೋಯಿಸದೆ
ನೋವಿನಲ್ಲಿ ಸುಖಕಂಡು ಹಿತವನೆ ನೀಡಿದ ಪ್ರೇಮಕತೆ…

ಸಾವಿನಲ್ಲೂ ಸಂಧಿಸದೇ
ಬದುಕೆಂಬ ಬವಣೆಯಲ್ಲಿ ಬಂಧಿಯಾದ
ಒಲವೆಂದರೆ ಏನೆಂದು ಹೇಳಿದ ಸುಂದರ ಸ್ವಪ್ನಕತೆ…

ಹುಚ್ಚು ಹುಚ್ಚಾಗಿ
ಒಲವಿನ ಪರಮಾರ್ಥವನೇ…ಹಾಳುಗೆಡಹುವವರ
ನಡುವೆ ತಾವರೆಯಂತೆ ಅರಳಿ ಕಂಗೊಳಿಸುತ್ತಿರುವ… ಪ್ರೇಮಕತೆ

-ಲೋಹಿತೇಶ್ವರಿ ಎಸ್ ಪಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ