ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಘಟಕ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ನಾಮಫಲಕ ಅನಾವರಣ‌

ಪನ್ನಾಪುರ:ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಘಟಕ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ನಾಮಫಲಕ ಅನಾವರಣ‌ ರಾಜ್ಯ ಅಧ್ಯಕ್ಷರಾದ ಎಲ್ಲಪ್ಪ ಕಟ್ಟಿಮನಿ ಇವರಿಂದ ನೆರವೇರಿತು.

ಕಾರಟಗಿ:ಪನ್ನಾಪುರ ಗ್ರಾಮದ ಕಲ್ಯಾಣ ಕರ್ನಾಟಕ ಸಂಘರ್ಷ ಸಮಿತಿಯ ನೂತನ ಗ್ರಾಮ ಘಟಕ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮಫಲಕವನ್ನು ತಾ.ಪಂ ಸದಸ್ಯ ದಾನನ ಗೌಡ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜಮ್ಮ ಭೀಮೇಶ್ ಕೆ.ಕೆ.ಡಿ,ಎಸ್,ಎಸ್ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಜಮದಗ್ನಿ ಚೌಡ್ಕಿಯ ನೇತೃತ್ವದಲ್ಲಿ ತಾಲೂಕಿನ ಪನ್ನಪೂರ ಗ್ರಾಮದಲ್ಲಿ ಗುರುವಾರ ಡಾ.ಬಾಬು ಜಗಜೀವನ್ ರಾವ್ ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ,ಪುಷ್ಪ ನಮನವನ್ನು ಅರ್ಪಿಸುವ ಮೂಲಕ ಅನಾವರಣ ಮಾಡಲಾಯಿತು.ಬಳಿಕ 50ಕ್ಕಿಂತ ಅಧಿಕ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ ಸೇರಿದಂತೆ ಹಣ್ಣು ಹಂಪಲುಗಳನ್ನು ವಿತರಿಸಿದರು.
ತಾ.ಪಂಚಾಯ್ತಿ ಮಾಜಿ ಸದಸ್ಯ ದಾನ ಗೌಡ ಮಾತನಾಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ನಾಮಫಲಕ ಮತ್ತು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಘಟಕ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಇನ್ನು ಸಮಾಜಮುಖಿ ಕೆಲಸಗಳಲ್ಲಿ ಪಾಲ್ಗೊಂಡು ಯಶಸ್ಸು ಪಡೆಯಿರಿ ಎಂದರು.
ಈ ವೇಳೆ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ ಪನ್ನಾಪುರ ಗ್ರಾಮದಲ್ಲಿ ನೂತನ ಗ್ರಾಮ ಘಟಕವನ್ನು ಮಾಡಿರುವುದು ಸಂಘಟನೆ ಕಾರ್ಯಕರ್ತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಅತ್ಯಾಚಾರ ದಬ್ಬಾಳಿಕೆಯನ್ನು/ಹಾಗೂ ದಿನನಿತ್ಯ ನಿರಂತರವಾಗಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯವನ್ನು ಅಸ್ಪೃಶ್ಯತೆ ತಡೆಯಲು ಹೋರಾಟ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಮೇಶ್ ಅಂಗಡಿ ಕೆ ಕೆ ಡಿ ಎಸ್ಎಸ್ ರಾಜ್ಯ ಕಾರ್ಯದರ್ಶಿ,ಜಮದಗ್ನಿ ಚೌಡಕಿ ಕೆಕೆ ಡಿಎಸ್ಎಸ್ ಜಿಲ್ಲಾಧ್ಯಕ್ಷರು,ಹುಲಿಗೇಶ ಬುಕ್ನಹಟ್ಟಿ ಕಾರಟಗಿ ತಾಲೂಕು ಅಧ್ಯಕ್ಷರು,ಮಂಜುನಾಥ್ ಬಡಿಗೇರ್ ಕನಕಗಿರಿ ತಾಲೂಕ ಅಧ್ಯಕ್ಷರು ಕೆಕೆ ಡಿಎಸ್ಎಸ್ ಸುಮಿತ್ರ ಕುಮಾರ್ ಗಂಗಾವತಿ ತಾಲೂಕ ಅಧ್ಯಕ್ಷರು ನೀಲಪ್ಪ ಡಣಾಪುರ್ ಗಂಗಾವತಿ ತಾಲೂಕ ಗೌರವಾಧ್ಯಕ್ಷರು ಕೆ ಕೆ ಡಿ ಎಸ್ ಎಸ್ ಸಣ್ಣ ಗಳ್ಳಶ ಕೆಕೆ ಡಿಎಸ್ಎಸ್ ತಾಲೂಕ ಪ್ರಧಾನ ಕಾರ್ಯದರ್ಶಿ ಮಹಾದೇವ್ ಕಾಟಾಪುರ ಪರಶುರಾಮ್ ನಂದಿಹಳ್ಳಿ ಪನ್ನಾಪುರ ಗ್ರಾಮ ಘಟಕದ ಪದಾಧಿಕಾರಿಗಳು ಗೌರವಾಧ್ಯಕ್ಷ ಸಣ್ಣ ಪರಸಪ್ಪ ಅಧ್ಯಕ್ಷರು ಗಾದಿಲಿಂಗಪ್ಪ ಹೊನ್ನೂರಪ್ಪ ಚಲವಾದಿ ಉಪಾಧ್ಯಕ್ಷರು ಮಲ್ಲಯ್ಯ ಉಪಾಧ್ಯಕ್ಷರು ಮಹಾದೇವಪ್ಪ ಪ್ರಧಾನ ಕಾರ್ಯದರ್ಶಿ ಯಮನೂರಪ್ಪ ಸಂಘಟನೆ ಕಾರ್ಯದರ್ಶಿ ಬಾಲಪ್ಪ ಸಹ ಕಾರ್ಯದರ್ಶಿ ನಿಂಗಪ್ಪ ಕಾರ್ಯದರ್ಶಿ ಅಭಿಷೇಕ್ ಖಜೇನ್ಸಿ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ