ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೆಣ್ಣು

ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು, 

ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು

ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ, 

ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ

ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ ಪ್ರೋತ್ಸಾಹ, 

ಸಂವಿಧಾನವಿತ್ತ ಶಿಕ್ಷಣದ ಅವಕಾಶ, 

ಮೂಡಿಸಿತು ಸ್ಮೃತಿಯೊಳಗೆ ವಿದ್ಯೆ ಪಡೆಯುವ ಉತ್ಸಾಹ…

ಪಂಜರದ ನೀಲಾಂಗನೆಗೆ ದೊರೆಯಿತು ಜ್ಞಾನ, 

ಗಗನ ಯಾತ್ರಿ ಯಾಗಲು ತಿಳಿಸಿತು ನಮ್ಮ ವಿಜ್ಞಾನ…. 

ಬಾಳೆಗೊನೆ ಬಿರಿಯದಂತೆ ನಿಭಾಯಿಸುವಳು 

ಜನನಿ ಸಂಸಾರ, 

ಶಿಕ್ಷಕಿಯಾಗಿ ಕಲಿಸುವಳು ಜಗದ್ರಕ್ಷಕನಾಗೋ ಕಂದನಿಗೆ ಸುಸಂಸ್ಕಾರ….. 

ಹೆಣ್ಣಿರದ ಧರೆಯು ಶೂನ್ಯವಿದ್ದಂತೆ, 

ಮನುಕುಲವ ಸೃಷ್ಟಿಸಿ ಮೆರೆದಿಹಳು ಗಾಂಧಾರೆಯಂತೆ……

ತನ್ನ ಕಾರ್ಯಕ್ಷೇತ್ರದ ಯಶಸ್ಸಿಗೆ ತನ್ಮಯವಾಗುವಳೂ ಹೆಲನ್ ಕೆಲ್ಲರಂತೆ, 

ದಕ್ಷ ಸೇವೆಯಲ್ಲಿ ಹೊಳೆಯುತಿಹಳು ಬೆಳದಿಂಗಳಂತೆ…….

ವಿರಾಮವಿರದ ರಮಣೀಯರ ಸಾಧನೆಯ ಸ್ಮರಿಸುವ ಕ್ಷಣ, 

ನಮಗೆ ವಿಶ್ವ ಸಂಸ್ಥೆ ಕೊಟ್ಟ ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನ.

ಶ್ರೇಷ್ಠ ಮಹಿಳೆಯರು ಸ್ಫೂರ್ತಿಯಾಗಲಿ,

ಅರಳುವ ಕುಸುಮಗಳಿಗಿಂದು, 

ಹರಸುವೆ ನಾ ತರುಣಿಯರ ಪರಿಶ್ರಮದ ಸಾಹಸಕೆ ಜಯವಾಗಲೆಂದು………

-ನಾಗಮಣಿ ಕನಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ