ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮೂಹಿಕ ವಿವಾಹ ಬಡವರಿಗೆ ನೆರವಾಗಲಿ:ಶಿವರಾಜ್ ತಂಗಡಗಿ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಳ,ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ನೆರವೇರಿತು.
ಬೆಳಗಿನ ಜಾವ,ಗಂಗೆ ಪೂಜೆಯೊಂದಿಗೆ,ಶ್ರೀ ಶರಣಬಸವೇಶ್ವರ ರುದ್ರ ಅಭಿಷೇಕ ಕರ್ಪೂರ ಪೂಜೆ ಮಂಗಳಾರತಿಯೊಂದಿಗೆ ಶ್ರೀ ನಿಜಲಿಂಗಯ್ಯ ಸ್ವಾಮಿಗಳು ಹಿರೇಮಠ ಇವರ ದಿವ್ಯ ಸಾನಿಧ್ಯದಲ್ಲಿ 9 ವಧು ವರರಿಗೆ ಸಾಮೂಹಿಕ ವಿವಾಹ ಗ್ರಾಮದ ಗುರಿಯರ ನೇತೃತ್ವದಲ್ಲಿ ನೆರವೇರಿಸಲಾಯಿತು.
ದೇವರ ದರ್ಶನ ಪಡೆದು ಸಚಿವರಾದ ಶಿವರಾಜ್ ತಂಗಡಿ ಅವರು ವಧು ವರರಿಗೆ ಆಶೀರ್ವದಿಸಿದರೂ, ಸಾಮೂಹಿಕ ವಿವಾಹದಿಂದ ಬರ ಪರಿಸ್ಥಿತಿಯಲ್ಲಿ ಬಡವರಿಗೆ ಬಹಳಷ್ಟು ನೆರವಾಗಲಿದೆ,ಈ ಒಂದು ಕಾರ್ಯಕ್ರಮ ಪ್ರತಿಯೊಂದು ಗ್ರಾಮದಲ್ಲಿ ನೆರವೇರಿಸಿದರೆ,ಬಡವರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ಶರಣಬಸವೇಶ್ವರ ಯುವಕ ಮಂಡಳಿವರಿಂದ ಸಚಿವರಿಗೆ ಸನ್ಮಾನಿಸಲಾಯಿತು,ಈ ಸಂದರ್ಭದಲ್ಲಿ ಷಣ್ಮುಖಪ್ಪ ಸೌಕಾರ್,ಅಂಬರೀಶಪ್ಪ ಸೌಕಾರ್,ಕರಿಯಪ್ಪ ಚಿಗರಿ, ಕೆಪಿಸಿಸಿ ಸದಸ್ಯರಾದ ಬಸವರಾಜ್ ನೀಲಗಂಟಿ, ತಿಮ್ಮಣ್ಣ ಗೋನಾಳ,ಸೋಮಣ್ಣ,ಮರಿಗೌಡ ಹಾಗಲ್ದಾಳ,ವೀರಭದ್ರಗೌಡ,ರುದ್ರೇಶ್ ಬಿ,ಶೇಖರ್ ಗೌಡ,ನಾಗಪ್ಪ ನವಲಿ,ತಿಮ್ಮಣ್ಣ ಕನಕ ರೆಡ್ಡಿ,ಸುರೇಶ್ ಗೋನಾಳ,ವೆಂಕಟೇಶ ಗ್ರಾಮದ ಗುರು-ಹಿರಿಯರು,ಯುವಕರು ಮಹಿಳೆಯರು,ಸರ್ವ ಸದ್ಭಕ್ತರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ