ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೇಹಾಳ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಳಿಕೆ ಖಂಡನೀಯ:ಜಡಿಯಪ್ಪ ಮುಕ್ಕುಂದಿ

ಕೊಪ್ಪಳ/ನವಲಿ:ಹುಬ್ಬಳ್ಳಿ ನಗರದಲ್ಲಿ ಬರ್ಬರವಾಗಿ ಕೊಲೆಯಾದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಕೋರಿ ನವಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕನಕಗಿರಿ ಮಂಡಲದ ಅಧ್ಯಕ್ಷರು ನವಲಿ ಯುವ ಮುಖಂಡರಾದ ಜಡಿಯಪ್ಪ ಮುಕ್ಕುಂದಿಯವರು ಹಾಡುಹಗಲೆ ಕಾಲೇಜ್ ಕ್ಯಾಂಪಸ್ ನಲ್ಲಿ ಒಬ್ಬ ಯುವತಿಯ ಕೊಲೆ ಮಾಡುತ್ತಾರೆ ಎಂದರೆ ರಾಜ್ಯದಲ್ಲಿ ಸರಕಾರ ಎಂಥಾ ವ್ಯವಸ್ಥೆ ತಂದಿದೆ,ಅಷ್ಟೆ ಅಲ್ಲದೆ ಕೊಲೆಯ ವಿಚಾರವಾಗಿ ಈ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಹೇಳಿಕೆಗಳು ಜವಾಬ್ದಾರಿಯಿಂದ ಕೂಡಿರದೆ ಅತ್ಯಂತ ಬಾಲಿಷ ಹಾಗೂ ಅಪ್ರಬುದ್ದ ಮಾತುಗಳು ಅಸಹ್ಯಮೂಡಿಸುತ್ತವೆ,ಇಂತವರು ರಾಜ್ಯದ ಜನರಿಗೆ ಹೇಗೆ ಸುರಕ್ಷತೆ ನೀಡಬಲ್ಲರು,ಇಂತಹ ಘಟನೆಗಳಿಂದ ಹೆಣ್ಣು ಮಕ್ಕಳು ನಿರ್ಭಿತಿಯಿಂದ ಶಾಲಾ ಕಾಲೇಜಿಗೆ ಹೊಗದಂತಾ ವಾತವರಣ ನಿರ್ಮಾಣವಾಗುತ್ತಿರುವುದು ದುರದೃಷ್ಠಕರ ಶೀಘ್ರವೇ ನೇಹಾಳ ಕೊಂದ ಪಾಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಅಪರಾಧಿಗೆ ರಕ್ಷಣೆ ಸಿಗುವಂತಾಗಬಾರದು ಎಂದರು,
ಕಾರ್ಯಕ್ರಮದಲ್ಲಿ ಹಿರಿಯರಾದ ಪಂಚಯ್ಯ ಸ್ವಾಮಿ ಬಿದ್ನೂರಮಠ,ಮೃತ್ಯುಂಜಯ ಸ್ವಾಮಿ ಹಿರೇಮಠ, ಭೀಮನಗೌಡ ಹರ್ಲಾಪೂರ,ದುರುಗೇಶ ಭಜಂತ್ರಿ, ಯುವ ಮುಖಂಡರಾದ ವೀರೇಶ ಹರಿಜನ, ಯಮನೂರ ಬುನ್ನಟ್ಟಿ,ಶಶಿಧರ ಸ್ವಾಮಿ ಸೋಮನಾಳ ದುರುಗೇಶ ಹರಿಜನ್,ರಾಮಣ್ಣ ಗಾಳಿ,ಹನುಮಂತ ಕಾರಟಗಿ,ಮಧು ಈಡಿಗೇರ,ಹೇಮನಗೌಡ,ಶಿವಯ್ಯ ಸ್ವಾಮಿ ನವಲಿ,ಸಂಗಮೇಶ ಅಂಗಡಿ,ಮಂಜುನಾಥ ಹರ್ಲಾಪೂರ,ಗಿರಿಯಪ್ಪ ಕಲ್ಲೂರ,ಜಡಿಯಪ್ಪ ಉಪ್ಪಳ, ಜಡಿಸಿದ್ದಯ್ಯ ಸ್ವಾಮಿ ಹಾಗೂ ನವಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡು ಶ್ರದ್ದಾಂಜಲಿ ಅರ್ಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ