ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 1 ನೇ ಅಂತರಾಷ್ಟ್ರೀಯ ಧ್ಯಾನ ದಿನಾಚರಣೆಯನ್ನು ಆಚರಿಸಲಾಯಿತು.
ಬೆಳಿಗ್ಗೆ ಎಂಟು ಗಂಟೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸುವ ಮೂಲಕ ದ್ಯಾನದ ಮಹತ್ವವನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ವೇಳಾ ಶಾಲೆಯ ಶಿಕ್ಷಕ ವೃಂದದ ಸಹಯೋಗದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳ ಯೋಗ ತರಬೇತಿದಾರ ಟೀಮ್ ವತಿಯಿಂದ ಧ್ಯಾನದ ಹುಟ್ಟು ಬೆಳವಣಿಗೆ ಹಾಗೂ ಧ್ಯಾನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದಾಗುವ ಪ್ರಯೋಜನೆಗಳನ್ನು ತಿಳಿಸಲಾಯಿತು.
ಶಾಲೆಯ ಶಾಲೆಯ ಹಳೆ ವಿದ್ಯಾರ್ಥಿಗಳ ಯೋಗ ತರಬೇತಿದಾರ ಹನುಮೇಶ ಭಾವಿಕಟ್ಟಿ ಮಾತನಾಡಿ ಯೋಗ ಧ್ಯಾನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿಗಳಾಗಿ ಹಾಗೂ ಶೈಕ್ಣಣಿಕ ರಂಗದಲ್ಲಿ ಏನನ್ನು ಬೇಕಾದರೂ ಸಾಧಿಸುವ ಶಕ್ತಿ ನೀಡಬಲ್ಲದು , ಒತ್ತಡದ ಜೀವನದಿಂದ ಮುಕ್ತರಾಗಬಹುದು ನಿತ್ಯ ಧ್ಯಾನ ಮಾಡುವುದರಿಂದ ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ , ಏಕಾಗ್ರತೆ ಹೆಚ್ಚಿಸುತ್ತದೆ ಎಂದು ಹೇಳಿದರು.
ಶಾಲೆಯ ಶಿಕ್ಷಕರಾದ ಚನ್ನಬಸಪ್ಪ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಧ್ಯಾನ ಮತ್ತು ಯೋಗದಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಉನ್ನತ ಸ್ಥಾನದಕ್ಕೆ ಏರುವಿರಿ ನಿತ್ಯ ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಹದ ಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಸುಗಮವಾಗಿರುತ್ತದೆಂದರು.
ಈ ವೇಳೆಯಲ್ಲಿ ಮುಂದಿನ ದಿನಗಳಲ್ಲಿ ಈ ಧ್ಯಾನದ ಮಹತ್ವವನ್ನು ಶಾಲಾ ಮುಖ್ಯ ಶಿಕ್ಷಕರಾದ ಹನುಮಂತ ಚವ್ಹಾಣ, ದೈಹಿಕ ಶಿಕ್ಷಕರಾದ ಚಂದ್ರಶೇಖರ ಜಾಪಾಳ , ಮಾಂತೇಶ ,ಅಯ್ಯನಗೌಡ ,ಚನ್ನಬಸಪ್ಪ , ಸಿದ್ದಲಿಂಗಯ್ಯ ಹಾಗೂ ಯೋಗ ಶಿಕ್ಷಕರಾದ ರಾಘವೇಂದ್ರ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಶಾಲೆಯ ಮಕ್ಕಳು ಭಾಗಿ ಇದ್ದರು.
