ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಷ್ಟಗಿ ತಾಲೂಕು ೧೩ ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಪೂರ್ವಬಾವಿ ಸಭೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದಲ್ಲಿ ಕುಷ್ಟಗಿ ತಾಲೂಕಿನ ೧೩ ನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಹಿನ್ನೆಲೆಯಲ್ಲಿ ಪೂರ್ವ ಬಾವಿಸಭೆಯನ್ನು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೂಲಗೇರಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ತಾಲೂಕು ಕ.ಸಾ.ಪ.ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮದ ಹಿರಿಯರಾದ ಸುರೇಶ ಎಲ್ ಕುಂಟನಗೌಡರು, ಮಾಜಿ ಜಿ.ಪ.ಸದಸ್ಯ ಪ್ರಕಾಶ ರಾಠೋಡ, ಮಾತನಾಡಿ ನಮ್ಮ ಗ್ರಾಮದಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆ ಸಂತಸ ವ್ಯಕ್ತಪಡಿಸಿ ಸಮ್ಮೇಳನದ ಯಶಸ್ವಿಗೆ ತನು ಮನ ಧನ ರೂಪದಲ್ಲಿ ಸಹಕಾರ ನೀಡುತ್ತೇವೆ ಎಂದು ನುಡಿದರು.
ಸಮ್ಮೇಳನದ ಉದ್ದೇಶ ಮತ್ತು ಸಮ್ಮೇಳನದ ರೂಪ ರೇಷೆ ಕುರಿತು ನಿಕಟ ಪೂರ್ವ ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರವಿಂದ್ರ ಬಾಕಳೆ ಮಾತನಾಡಿ ನಿಮ್ಮ ಊರಿನಲ್ಲಿ ಸಮ್ಮೇಳನ ನಡೆಯುವುದು ಐತಿಹಾಸಿಕವಾಗಿ ದಾಖಲಾರ್ಹವಾಗುವಲ್ಲಿ ಎರಡು ಮಾತಿಲ್ಲ, ಬಂದಂತಹ ಅತಿಥಿಗಳಿಗೆ ಊಟೋಪಹಾರ ವ್ಯವಸ್ಥೆ ಸೇರಿದಂತೆ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಕೇಂದ್ರ ಕ.ಸಾ.ಪ ಪ್ರತಿನಿಧಿ ನಬೀಸಾಬ ಕುಷ್ಟಗಿ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನ ನಾಡು,ನುಡಿ,ನೆಲ ಜಲದ ಕುರಿತು ಹಲವಾರು ಗೋಷ್ಟಿ ಏರ್ಪಡಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಬೇಕಾಗಿದೆ ಎಂದು ಹೇಳಿದರು.
ಮಾಜಿ ತಾ.ಪ.ಸದಸ್ಯ ಶೇಖರ ಹೊರಪ್ಯಾಟಿ ಮಾತನಾಡಿ ನಮ್ಮ ಹೂಲಗೇರಿ ಗ್ರಾಮವನ್ನು ಸಮ್ಮೇಳನ ಮಾಡಲು ಆಯ್ಕೆ ಮಾಡಿದ್ದಕ್ಕಾಗಿ ತಾಲೂಕು ಕ.ಸಾ.ಪ ಕ್ಕೆ ಧನ್ಯವಾದಗಳು ನಿಮ್ಮ ಆಶಯದಂತೆ ಸಮ್ಮೇಳನ ಮಾಡುತ್ತೇವೆ ಎಂದರು.
ಕ.ಸಾ.ಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ಸ್ವಾಗತಿಸಿ ಸಮ್ಮೇಳನದ ಯಶಸ್ವಿಗೆ ಕರೆ ನೀಡಿದರು.
ಕೋಶಾಧ್ಯಕ್ಷ ಅಬ್ದುಲ್ ಕರಿಂ ಒಂಟೇಳಿ ಸಮ್ಮೇಳನದ ಖರ್ಚು ವೆಚ್ಚದ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ರವಿ ಚವ್ವಾಣ, ಉಪಾಧ್ಯಕ್ಷ ಶಾಂತವ್ವ ಶಂಕ್ರಗೌಡಾ, ಸೇರಿದಂತೆ ಸದಸ್ಯರಾದ ಲಕ್ಷ್ಮೀಬಾಯಿ ಚೌರದ,ವಿಜಯಲಕ್ಷ್ಮಿ ಶಂಕರ, ದಾಧೀಭಿ ಶ್ಯಾಮೀದಸಾಬ,ಮೈಬೂಬ ಹುಸೇನ್ ಉಂಡಿ, ಚಂದ್ರುಗೌಡಾ, ಯಂಕಪ್ಪ ತಳವಾರ,ಚಂದಪ್ಪ ಮಲ್ಲಪ್ಪ, ಶೋಬಾರಾಠೋಡ,ವೀರುಪಾಕ್ಷಗೌಡ ಹಾಲಬಾವಿ,ಚಂದ್ರಶೇಖರ, ಶರಣಪ್ಪ ಸೇರಿದಂತೆ ಮಂಜುನಾಥ ಗುಳೇದಗುಡ್ಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹೂಲಗೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ತಿಂಗಳ ಕೊನೆಯ ವಾರದಲ್ಲಿ ಮಾಡುವುದಾಗಿ ನಿರ್ಣಯ ಮಾಡಿದರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರ ಗಮನಕ್ಕೆ ತಂದು ದಿನಾಂಕ ನಿಗದಿಗೊಳಿಸಲು ಪದಾಧಿಕಾರಿಗಳು ತೀರ್ಮಾನಕ್ಕೆ ಬಂದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ