ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಜಿ ಸಚಿವ ಶ್ರೀರಾಮುಲರ ಜನ ಬೆಂಬಲದಿಂದ ಜನಾರ್ಧನ ರೆಡ್ಡಿ ಶಾಸಕರಾಗಿ ಗೆದ್ದಿದ್ದಾರೆ : ಯಮನೂರ ನಾಯಕ ಇದ್ಲಾಪುರ್

ಕೊಪ್ಪಳ/ಕನಕಗಿರಿ : ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗವು 3ನೇ ಅತಿದೊಡ್ಡ ಸಮಾಜವಾಗಿದ್ದು ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅವರು ಮಾಜಿ ಸಚಿವ ಶ್ರೀರಾಮುಲು ಅವರ ಜನ ಬೆಂಬಲದಿಂದ ಶಾಸಕರಾಗಿ ಗೆದ್ದು ಈಗ ನಾನೇ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಬೆಳೆಸಿರುವುದಾಗಿ ಹೇಳುವದು ಹಾಸ್ಯಾಸ್ಪದವಾಗಿದೆ ಎಂದು ಯುವ ನಾಯಕರಾದ ಯಮನೂರ ನಾಯಕ ಇದ್ಲಾಪುರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಾಜ್ಯದಲ್ಲಿ ನಾಯಕ ಜನಾಂಗ 3 ನೇ ಅತಿದೊಡ್ಡ ಸಮಾಜ ಎಂಬುದು ಗಂಗಾವತಿ ಶಾಸಕ
ಜನಾರ್ಧನರೆಡ್ಡಿ ಅವರ ಗಮನಕ್ಕಿರಲಿ. ಜನಾರ್ಧನ ರೆಡ್ಡಿ ಅವರು ರಾಜಕೀಯವಾಗಿ ಬೆಳೆದದ್ದು ಶ್ರೀರಾಮುಲು ಹೆಸರೇಳಿ ನಾಯಕ ಜನಾಂಗದಿಂದ ಬೆಳೆದದ್ದು ಎಂಬುದನ್ನು ಮರೆತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ನಿಮ್ಮ ಬೆನ್ನಿಗೆ ನಿಂತಿದ್ದು ಇದೇ ವರ್ಗ ಎಂಬುದು ನೆನಪಿರಲಿ,
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕ ಜನಾಂಗ ಎಸ್ ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ವಿಚಾರವಾಗಿ ಬಿಜೆಪಿ ವಿರುದ್ಧ ತಿರುಗಿ ಬಿದ್ದ
ಪರಿಣಾಮವಾಗಿ ಸೋಲನುಭವಿಸಿದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಇದೇ ಸಮಾಜದ ರಾಜಕಾರಣಿಗಳು ಕಾರಣ.ಬೇರೆ ಪಕ್ಷದಲ್ಲಿ ಗೆದ್ದು ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿ ಬಲ ತುಂಬಿದರು. ಆದರೆ ಅಧಿಕಾರಕ್ಕೇರಲು ಕಾರಣರಾದ ಇದೇ ನಾಯಕ ಜನಾಂಗದ ಶ್ರೀರಾಮುಲು ಕೆ.ಶಿವನಗೌಡನಾಯಕ, ರಾಜೂ ಗೌಡ, ಪ್ರತಾಪಗೌಡ ಪಾಟೀಲ್ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಕಡೆಗಣಿಸುತ್ತಿದೆ. ಇವರೆಲ್ಲರೂ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಕಾರಣರಾದವರು ಎಂಬು- ದನ್ನು ಈ ಪಕ್ಷದ ಮುಖಂಡರು ಒಮ್ಮೆ ಮನವರಿಕೆ ಮಾಡಿಕೊಳ್ಳ ಬೇಕು. ಈ ನಾಲ್ವರೂ ಬಿಜೆಪಿಯಿಂದಲೇ ಹಂತ ಹಂತವಾಗಿ ಕಡೆಗಣಿಸಿಲ್ಪಟ್ಟಿದ್ದಾರೆ. ಇತರೆ ಜನಾಂಗದ ಮುಖಂಡರು ಚುನಾವಣೆಯಲ್ಲಿ ಸೋತರೆ ವಿಧಾನಪರಿಷತ್ತು ಮತ್ತು ರಾಜ್ಯ ಸಭೆಗೆ ಆಯ್ಕೆ ಮಾಡಿ ಸ್ಥಾನಮಾನ ನೀಡುತ್ತಾರೆ. ಆದರೆ ನಾಯಕ ಜನಾಂಗದ ಈ ಮೇಲ್ಕಂಡ ನಾಲ್ವರಿಗೆ ಪಕ್ಷದಲ್ಲಿ ಯಾವ ಸ್ಥಾನ ನೀಡಿದೆ ? ಈ ಬಾರಿ ಈ ಜನಾಂಗ ಕಾಂಗ್ರೆಸ್ ಕಡೆ ವಾಲಿದ್ದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿ ಬಿಜೆಪಿ ಸೋತು ಸುಣ್ಣವಾಯಿತು. ಆದರೆ ಯಾವುದೇ ಪಕ್ಷ ಅಧಿಕಾರಕ್ಕೇರಿದರೂ ಉನ್ನತ ಅಧಿಕಾರ ಸ್ಥಾನಮಾನಗಳು ಮಾತ್ರ ಈ ವರ್ಗಕ್ಕೆ ನೀಡದೆ ಕಡೆಗಣನೆ ಮಾಡಲಾಗುತ್ತಿದೆ.
ವಾಲ್ಮೀಕಿ ನಾಯಕ ಸಮಾಜವನ್ನು ಕೇವಲ ಮತ ಬ್ಯಾಂಕಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಯುವ ನಾಯಕರಾದಂತ ಯಮನೂರ ನಾಯಕ ಇದ್ಲಾಪುರ್ ಅವರು ಪತ್ರಿಕೆ ಹೇಳಿಕೆ ಮೂಲಕ ಗಂಭೀರವಾಗಿ ಆರೋಪಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ