ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಕೋಶ ನಿಮಿತ್ಯ ಇತಿಹಾಸ ವಿಭಾಗದದಿಂದ ಇತಿಹಾಸದಲ್ಲಿ ವೈಜ್ಞಾನಿಕ ಚಿಂತನೆ ಎಂಬ ವಿಷಯದ ಕುರಿತು ಬುಧುವಾರದಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಆಶಾ ಇತಿಹಾಸದ ಮುಖ್ಯಸ್ಥರು ಪ್ರಿಯದರ್ಶಿ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿ ಇವರು ಇತಿಹಾಸವನ್ನು ಅಧ್ಯಯನ ಮಾಡಬೇಕಾದಾಗ ವೈಜ್ಞಾನಿಕ ಚಿಂತನೆಯ ಮೂಲಕ ಅಭ್ಯಾಸಬೇಕು ನಾಗರಿಕತೆಯ ಕಾಲಘಟ್ಟದಿಂದ ಪ್ರಸ್ತುತ ಐತಿಹಾಸಿಕ ವಿಷಯಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಮಕ್ಕಳಿಗೆ ತಿಳಿಸಿದರು. ಈಜಿಪ್ಟ್ ನಾಗರಿಕತೆ, ಮಸಪಟೊಮಿಯಾ ನಾಗರಿಕತೆ, ಹರಪ್ಪ ನಾಗರಿಕತೆ ವೈದಿಕ ಸಂಸ್ಕೃತಿ ಶಿಲಾಯುಗ ಕಾಲದ ಆಯುಧಗಳ ತಯಾರಿಕೆ ಅವುಗಳಲ್ಲಿರುವ ತಂತ್ರಜ್ಞಾನ ರಾಜ ಮಹಾರಾಜರ ಕಾಲದ ವಾಸ್ತುಶಿಲ್ಪ ಗಣಿತಶಾಸ್ತ್ರ ವೈದ್ಯಕೀಯ ಶಾಸ್ತ್ರ ಮುಂತಾದ ಅಂಶಗಳನ್ನು ಬಹಳ ತಾರ್ತಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಾಗರತ್ನ ಬಿ ತಮಿಳ್ನಾಳ ಇತಿಹಾಸ ವಿಭಾಗದ ಮುಖ್ಯಸ್ಥರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಇವರು ಮುಖ್ಯ ಅತಿಥಿಗಳ ಪರಿಚಯ ಹಾಗೂ ಆಂತರಿಕ ಗುಣಮಟ್ಟ ಭರವಸ ಕೋಶದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಅಧ್ಯಕ್ಷಿಯ ಸ್ಥಾನವನ್ನು ವಹಿಸಿಕೊಂಡಂತಹ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರು ಡಾ. ಗಣಪತಿ ಲಮಾಣಿ ಇತಿಹಾಸವು ಜೀವನದ ಅವಿಭಾಜ್ಯ ಅಂಗ ಮಾನವನ ಕೈಗೊಂಡ ಕಾರ್ಯಗಳೆಲ್ಲವೂ ಹಾಸನ ಅನುಭವ ಗಳಿಂದ ಕಂಡುಕೊಂಡಿತ್ತು ಹಾಗಾಗಿ ಇತಿಹಾಸದಲ್ಲಿ ಬರುವ ವಿಷಯಗಳು ಅತ್ಯಂತ ವೈಜ್ಞಾನಿಕವಾಗಿರುವಂತವುಗಳು ಇಂತಹ ಉಪನ್ಯಾಸಗಳನ್ನ ಕೇಳುವುದರ ಮೂಲಕ ಸ್ಪರ್ಧಾತ್ಮಕವಾದಂತ ಪರೀಕ್ಷೆಗಳಲ್ಲಿಯೂ ಕೂಡಾ ನೀವು ಯಶಸ್ಸನ್ನು ಕಾಣಲು ಸಾಧ್ಯ ಎಂಬ ಅಧ್ಯಕ್ಷೀಯ ನುಡಿಗಳನ್ನು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ IQAC ಸಂಯೋಜಕರಾದ ಡಾಕ್ಟರ್ ಅಶೋಕ್ ಅವರು ಉಪಸ್ಥಿತರಿದ್ದರು. ಕುಮಾರಿ ಶೋಭಾ ಪ್ರಾರ್ಥನೆಗೈದರು, ಕುಮಾರಿ ನಿರ್ಮಲ ನಿರೂಪಿಸಿದರು, ಮಹೇಶ್ ಪೂಜಾರ್ ಸ್ವಾಗತಿಸಿದರು, ಕುಮಾರಿ ಮೋನಿಕಾ ವಂದಿಸಿದರು,
ಇತಿಹಾಸದ ಉಪನ್ಯಾಸಕರಾದ ಶ್ರೀ ಪುತ್ರೇಶ್ ಗೌಡ ಮತ್ತು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಯಾದ ಶ್ರೀಮತಿ ಬಸಮ್ಮ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ
