ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಂಜಾನ್-ಯುಗಾದಿಯ ಐಕ್ಯತೆ..!!

ಈ ಹಬ್ಬಗಳು ಈ ವರ್ಷದಿ ಒಂದಾಗಿ
ಒಗ್ಗೂಡಿ ಬಂದು ಹೇಳುತ್ತಿವೆ ನಮಗಾಗಿ
ಭಾವೈಕ್ಯತೆಯ ಬದುಕಿಗೆ ಫಲಪ್ರದವಾಗಿ
ಬದುಕಿರಿ ಜಾತಿ ಎಂಬುದರ ಹೊರತಾಗಿ..!!

ಯುಗಾದಿ-ರಂಜಾನ್ ಹಬ್ಬಗಳ ರೀತಿ
ಹೀಗೆಯೇ ಒಂದಾಗೋಣ ಎಂಬ ನೀತಿ
ಸಾಬೀತು ಮಾಡಿದೆ ನೋಡು ಪ್ರಕೃತಿ
ಸಾಕಿನ್ನು ಜಾತಿಯ ಕುರುಡು ಪ್ರೀತಿ..!!

ಮಾನವೀಯತೆಯ ಪರಿಧಿಯಲ್ಲಿ ಸುತ್ತಾಡಿ
ಭ್ರಾತೃತ್ವ ಬಾವನೆಯ ಬಂಧದಲ್ಲಿ ಒಗ್ಗೂಡಿ
ಹಬ್ಬಗಳು ನೀಡಿದ ಸಂದೇಶವನ್ನು ನೋಡಿ
ಜಾತಿ ಮತ ಪಂಥಗಳನ್ನು ಮಾಡಬೇಡಿ..!!

ಭಾವೈಕ್ಯತೆಗೆ ಧಕ್ಕೆ ಬರದಂತೆ ಹದವರಿತು
ಸೃಷ್ಟಿಯ ಈ ನಿಯಮಗಳನ್ನು ಅರಿತು
ಮೋಸ ದ್ವೇಷ ಅಸೂಯೆಗಳನ್ನು ಮರೆತು
ನಾವೆಲ್ಲರೂ ಕೂಡಿ ಬಾಳೋಣ ಬೆರೆತು..!!

  • ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು
    ಸ ಮಾ ಹಿ ಪ್ರಾ ಶಾಲೆ ವಿದ್ಯಾನಗರ, ಕುಷ್ಟಗಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ