ಬಂದರು ಅವರು,ದಾರಿ ಬಿಡಿ,
ದಲಿತರು ಅವರು,ದಾರಿ ಕೊಡಿ ಅವಮಾನ,ಅಪಮಾನಗಳೆರಡೂ,ಹೊಸದಲ್ಲ ನಮಗೆ,
ನಮ್ಮ ನೋಯಿಸುವುದೇ
ಕೆಲಸ ನಿಮಗೆ,
ಶಿಕ್ಷಣವ ಪಡೆದರೂ
ಸೌಲಭ್ಯ ವಂಚಿತರು ನಾವು,
ಸಂಘಟಿತರಾದರೂ ಹೋರಾಟದ ಕಿಚ್ಚು ಹಚ್ಚದವರು,
ಸಂವಿಧಾನ ಶಿಲ್ಪಿಗೆ
ಅಪಮಾನದ ಸಂಕೋಲೆ
ತೊಡಿಸಿದವರು,ನಾವು,
ನಾವು ದಲಿತರು,
ನಾವು ಶೋಷಿತರು
ನಾವು ದಮನಿತರು,
ಧ್ವನಿಯ ಕಳಕೊಂಡವರು
ಸಿಟ್ಟು, ಸೆಡವುಗಳಿಗೆ ಉತ್ತಮ
ಉದಾಹರಣೆಯಾದವರು !
ದಲಿತ ಸೂರ್ಯ ಬಂದರೂ
ಬಾಳಲಿ ಬೆಳಕ ಕಾಣದವರು,
ಕತ್ತಲಿನಲ್ಲಿಯೇ ಕರಗಿದವರು!
ದಲಿತ ಸೂರ್ಯ ಬಂದರೂ
ನಿಷ್ಪ್ರಯೋಜಕ ರಾದವರು!
ಇವರೇ ಇವರೇ ನಾಯಕರು,
ಆದರೀಗಿವರು ನಾಲಾಯಕರು!
ಆಗಬೇಕಿದೆ ನಾಯಕರೀಗ
ನಿಗಿ ನಿಗಿ ಉರಿವ ಕೆಂಡ,
ಇಲ್ಲದಿರೆ ಏನಿದ್ದರೂ ದಂಡ!
ಪ್ರಜ್ವಲಿಸಿ ಉಜ್ವಲಿಸಬಾರದೇ,
ಒಂದು ಬಾರಿ ದಲಿತ ಸೂರ್ಯ!

ಶಿವಪ್ರಸಾದ್ ಹಾದಿಮನಿ.✍️.
ಕೊಪ್ಪಳ.
