ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಲಿತ ಸೂರ್ಯ

ಬಂದರು ಅವರು,ದಾರಿ ಬಿಡಿ,
ದಲಿತರು ಅವರು,ದಾರಿ ಕೊಡಿ ಅವಮಾನ,ಅಪಮಾನಗಳೆರಡೂ,ಹೊಸದಲ್ಲ ನಮಗೆ,
ನಮ್ಮ ನೋಯಿಸುವುದೇ
ಕೆಲಸ ನಿಮಗೆ,
ಶಿಕ್ಷಣವ ಪಡೆದರೂ
ಸೌಲಭ್ಯ ವಂಚಿತರು ನಾವು,
ಸಂಘಟಿತರಾದರೂ ಹೋರಾಟದ ಕಿಚ್ಚು ಹಚ್ಚದವರು,
ಸಂವಿಧಾನ ಶಿಲ್ಪಿಗೆ
ಅಪಮಾನದ ಸಂಕೋಲೆ
ತೊಡಿಸಿದವರು,ನಾವು,
ನಾವು ದಲಿತರು,
ನಾವು ಶೋಷಿತರು
ನಾವು ದಮನಿತರು,
ಧ್ವನಿಯ ಕಳಕೊಂಡವರು
ಸಿಟ್ಟು, ಸೆಡವುಗಳಿಗೆ ಉತ್ತಮ
ಉದಾಹರಣೆಯಾದವರು !

ದಲಿತ ಸೂರ್ಯ ಬಂದರೂ
ಬಾಳಲಿ ಬೆಳಕ ಕಾಣದವರು,
ಕತ್ತಲಿನಲ್ಲಿಯೇ ಕರಗಿದವರು!
ದಲಿತ ಸೂರ್ಯ ಬಂದರೂ
ನಿಷ್ಪ್ರಯೋಜಕ ರಾದವರು!
ಇವರೇ ಇವರೇ ನಾಯಕರು,
ಆದರೀಗಿವರು ನಾಲಾಯಕರು!

ಆಗಬೇಕಿದೆ ನಾಯಕರೀಗ
ನಿಗಿ ನಿಗಿ ಉರಿವ ಕೆಂಡ,
ಇಲ್ಲದಿರೆ ಏನಿದ್ದರೂ ದಂಡ!
ಪ್ರಜ್ವಲಿಸಿ ಉಜ್ವಲಿಸಬಾರದೇ,
ಒಂದು ಬಾರಿ ದಲಿತ ಸೂರ್ಯ!

ಶಿವಪ್ರಸಾದ್ ಹಾದಿಮನಿ.✍️.
ಕೊಪ್ಪಳ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ