ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ವಚನಗಳು.

೧.
ಪ್ರಾಣಿಗಳ ಹಿಂಸಿಸಿ
ಪ್ರಾಣಾಯಾಮವ
ಮಾಡಿದರೇನು ಪ್ರಯೋಜನವಯ್ಯ!
ಒಲ್ಲದ ದೇವರುಗಳಿಗೆ
ಕುರಿ,ಕೋಳಿ,ಕೋಣಗಳ
ಬಲಿ ಕೊಟ್ಟರೇನು ಪ್ರಯೋಜನವಯ್ಯ..!
ಇಂಥ ಮನುಜ ಪ್ರಾಣಿಗಳನೇನೆಂಬೆ ಶಿವ ಶಿವಾ!

೨.
ಕಾಯವನು ದಂಡಿಸಿ
ಕಾಯಕವ ಮಾಡಿ
ಕೈಲಾಸವನು ಕಾಣಿರೆಂದರು,
ಬಸವಾದಿ ಪ್ರಮಥರು,
ಕಾಯವನು ದಂಡಿಸದೇ
ಕೈಲಾಸ ಬಯಸುತಿಹರು
ಆಧುನಿಕರು ಎಂದ ಶಿವ ಶಿವಾ!

೩.
ನೋಡಿ ನೋಡಿ ಸಾಕಾಗಿದೆ
ಅಯ್ಯ,ಈ ಸಮಾಜದ ಜನರ
ನಡೆ -ನುಡಿಗಳನು,ಅದಕ್ಕೇ
ಅಲ್ಲವೇನಯ್ಯ, ಅಣ್ಣ ಬಸವಣ್ಣ ಹೇಳಿದ್ದು, ಕಣ್ಣು ಕಾಣದ
ಅಂಧಕನ ಮಾಡೆಂದು,!
ಇದೆಂಥ ಕಾಲ ಶಿವ ಶಿವಾ!

೪.
ಕೇಳಲು ಹೋದರೇನು
ನಿತ್ಯ ಪ್ರವಚನ,
ಪಾಲಿಸದಿದ್ದರೆ ಬಸವಾದಿ
ಪ್ರಮಥರ ವಚನ,
ಏನು ಪ್ರಯೋಜನ?
ಎಂದ ಶಿವ ಶಿವಾ!

  • ಶಿವಪ್ರಸಾದ್ ಹಾದಿಮನಿ. ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ